LATEST NEWS
ಮತ್ತೆ ಶಬರಿಮಲೆಗೆ ತೆರಳಲು ಭದ್ರತೆ ಕೋರಿ ಬಂದ ಬಿಂದು ಅಮ್ಮಿನಿ ಮೇಲೆ ದಾಳಿ
ಮತ್ತೆ ಶಬರಿಮಲೆಗೆ ತೆರಳಲು ಭದ್ರತೆ ಕೋರಿ ಬಂದ ಬಿಂದು ಅಮ್ಮಿನಿ ಮೇಲೆ ದಾಳಿ
ಕೇರಳ ನವೆಂಬರ್ 26: ಕಳೆದ ವರ್ಷ ಶಬರಿ ಮಲೆ ಅಯ್ಯಪ್ಪ ದೇಗುಲ ಪ್ರವೇಶ ಮಾಡಿದ್ದ ಎಡಪಂಥೀಯ ಕಾರ್ಯಕರ್ತೆ ಬಿಂದು ಅಮ್ಮಿನಿ ಮೇಲೆ ಕೊಚ್ಚಿ ಪೊಲೀಸ್ ಆಯುಕ್ತರ ಕಚೇರಿ ಎದುರು ಖಾರದಪುಡಿ ಎರಚಲಾಗಿದೆ.
ಪುಣೆಯ ಸಾಮಾಜಿಕ ಕಾರ್ಯಕರ್ತೆ ತೃಪ್ತಿ ದೇಸಾಯಿ ಶಬರಿಮಲೆಗೆ ತೆರಳಲು ಕೊಚ್ಚಿಗೆ ಆಗಮಿಸಿದ್ದು, ಅವರೊಂದಿಗೆ ತೆರಳಲು ಬಿಂದು ಅಮ್ಮಿನಿ ನಿರ್ಧರಿಸಿದ್ದರು. ಈ ಹಿನ್ನಲೆಯಲ್ಲಿ ಭದ್ರತೆಗಾಗಿ ಪೊಲೀಸ್ ಆಯುಕ್ತರ ಕಚೇರಿಗೆ ತೆರಳಿದ್ದು, ಈ ಸಂದರ್ಭದಲ್ಲಿ ಅವರ ಮೇಲೆ ಖಾರದಪುಡಿ ಎರಚಲಾಗಿದೆ. ಕೂಡಲೇ ಬಿಂದು ಅಮ್ಮಿನಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು.
ಕಳೆದ ವರ್ಷ ಶಬರಿಮಲೆ ಪ್ರವೇಶಿಸಲು ಪ್ರಯತ್ನಿಸಿ ಪ್ರತಿಭಟನೆಗೆ ಹೆದರಿ ಹಿಂದೆ ಹೋಗಿದ್ದ ತೃಪ್ತಿ ದೇಸಾಯಿ ಇಂದು ಮತ್ತೆ ಶಬರಿಮಲೆ ಪ್ರವೇಶಿಸಲು ಕೊಚ್ಚಿಗೆ ಆಗಮಿಸಿದ್ದಾರೆ. ಈ ಸಂದರ್ಭ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ದೇಶದ ಸಂವಿಧಾನದ ದಿನ. ಈ ದಿನವೇ ನಾವು ಶಬರಿಮಲೆಯ ಅಯ್ಯಪ್ಪ ದೇಗುಲ ಪ್ರವೇಶಿಸಲು ನಿರ್ಧರಿಸಿದ್ದೆವೆ.
ಇದಕ್ಕಾಗಿಯೇ 2018ರ ಸುಪ್ರೀಂ ಕೋರ್ಟ್ ಆದೇಶದೊಂದಿಗೆ ನಾವಿಲ್ಲಿಗೆ ಬಂದಿದ್ದೇವೆ. ದೇಗುಲ ಪ್ರವೇಶ ಮಾಡಿಯೇ ನಾನು ಹಿಂದಿರುಗುತ್ತೇನೆ,’ ಎಂದು ತಿಳಿಸಿದ್ದಾರೆ. ಅಲ್ಲದೆ, ‘ಶಬರಿಮಲೆಗೆ ತೆರಳಲು ಬಂದಿರುವ ನಮ್ಮನ್ನು ರಾಜ್ಯ ಸರ್ಕಾರ ಅಥವಾ ಪೊಲೀಸರು ತಡೆಯಲಿ ನೋಡೋಣ. ಭದ್ರತೆ ಸಿಕ್ಕರೂ, ಸಿಗದೇ ಹೋದರೂ ನಾವು ದೇಗುಲ ಪ್ರವೇಶ ಮಾಡಿಯೇ ತೀರುತ್ತೇವೆ,’ ಎಂದೂ ಅವರು ಹೇಳಿದ್ದಾರೆ.
Women activist Bindu pepper sprayed outside Kochi commissioner office, when came to join Trupti Desai and go to #sabarimala to offer prayers. pic.twitter.com/Odwyab3y2Q
— Mugilan Chandrakumar (@Mugilan__C) November 26, 2019
You must be logged in to post a comment Login