Connect with us

    KUNDAPURA

    ಕುಂದಾಪುರದಲ್ಲಿ ಬೈಕ್ ಕಳ್ಳರಿಗೆ ಸಾರ್ವಜನಿಕರಿಂದ ಬಿತ್ತು ಗೂಸಾ…!

    ಕುಂದಾಪುರ, ಜನವರಿ 26: ಸಂಶಯಾಸ್ಪದವಾಗಿ ಓಡಾಡುತ್ತಿದ್ದ ಇಬ್ಬರು ಬೈಕ್ ಕಳ್ಳರನ್ನು ಸಾರ್ವಜನಿಕರು ಹಿಡಿದು ಕೊಟ್ಟ ಘಟನೆ ಉಡುಪಿಯ ಹಳ್ಳಾಡಿಯಲ್ಲಿ ನಡೆದಿದೆ.

    ಕುಂದಾಪುರ ತಾಲೂಕಿನ ಗುಡ್ಡೆಟ್ಟು ಬಳಿ ಕೆಲ ಯುವಕರು ಅನುಮಾನಾಸ್ಪದವಾಗಿ ಓಡಾಟ ಮಾಡುತ್ತಿದ್ದರು. ಸಾರ್ವಜನಿಕರು ಗುಂಪುಗೂಡಿ ಇವರು ಮಕ್ಕಳ ಕಳ್ಳರು ಇರಬಹುದು ಎಂದು ಸಂಶಯ ಬಂದು ಪೊಲೀಸರಿಗೆ ಹಿಡಿದು ಕೊಟ್ಟಿದ್ದಾರೆ. ವಿಚಾರಣೆ ನಡೆಸಿದಾಗ ಅವರು ಮಕ್ಕಳ ಕಳ್ಳರು ಅಲ್ಲ, ಅವರು ಬೈಕ್ ಗಳನ್ನು ಕದ್ದ ಖದೀಮರು ಅಂತ ಗೊತ್ತಾಗಿದೆ.

    ರಾಕೇಶ್ ಮತ್ತು ಸುರೇಶ್ ಮಂಗಳೂರಿನ ಉರ್ವದಲ್ಲಿ ಬೈಕನ್ನ ಕದ್ದು ಕುಂದಾಪುರಕ್ಕೆ ಬಂದಿದ್ದರು. ಇಲ್ಲಿ ವ್ಯವಹಾರ ಕುದುರಿಸಿದ್ದಾನೆ ಕಂಡು ಸ್ಥಳೀಯರಿಗೆ ಅನುಮಾನ ಬಂದು ಹಿಡಿದಿದ್ದಾರೆ. ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಯುವಕರ ಜೊತೆ ಇನ್ನಿಬ್ಬರು ಇದ್ದರು ಎಂಬ ಸಾರ್ವಜನಿಕರ ಹೇಳಿಕೆಯ ಮೇಲೆ ತಲೆಮರೆಸಿಕೊಂಡವರಿಗೆ ತಲಾಶ್ ನಡೆದಿದೆ.

    Video:

    Share Information
    Advertisement
    Click to comment

    You must be logged in to post a comment Login

    Leave a Reply