Connect with us

    LATEST NEWS

    ನದಿ ದಡದ ರಸ್ತೆಯಲ್ಲಿ ಬೈಕ್ ರೇಸಿಂಗ್ ಇಬ್ಬರ ಸಾವು

    ನದಿ ದಡದ ರಸ್ತೆಯಲ್ಲಿ ಬೈಕ್ ರೇಸಿಂಗ್ ಇಬ್ಬರ ಸಾವು

    ಮಂಗಳೂರು ನವೆಂಬರ್ 23: ಎರಡು ಬೈಕ್ ಗಳ ನಡುವೆ ಮುಖಾಮುಖಿ ಡಿಕ್ಕಿ ಯಾಗಿ ಬೈಕ್ ಸವಾರರಿಬ್ಬರು ನದಿಗೆ ಬಿದ್ದು ಮೃತಪಟ್ಟ ಘಟನೆ ನಡೆದಿದೆ.

    ಮೃತರನ್ನು ವಿಜಯ್ (22) ನಿಖಿಲ್ (22) ಎಂದು ಗುರುತಿಸಲಾಗಿದೆ.

    ಮಂಗಳೂರಿನ ಕುಳೂರು ಬಳಿಯ ಪಲ್ಗುಣಿ ನದಿ ದಡದ ರಸ್ತೆಯಲ್ಲಿ ವೇಗವಾಗಿ ಬೈಕ್ ಚಲಾಯಿಸಿದ್ದರೆಂದು ಹೇಳಲಾಗಿದ್ದು. ಎರಡು ಬೈಕ್ ಗಳ ನಡುವೆ ಮುಖಾಮುಖಿ ಡಿಕ್ಕಿ ನಡೆದಿದೆ. ಡಿಕ್ಕಿಯ ರಭಸಕ್ಕೆ ನಿಯಂತ್ರಣ ತಪ್ಪಿ ಪಲ್ಗುಣಿ ನದಿಗೆ ಸವಾರರಿಬ್ಬರು ಬಿದ್ದಿದ್ದಾರೆ.

    ನದಿಗೆ ಬಿದ್ದ ಸವಾರರು ನೀರಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಸ್ಥಳಕ್ಕೆ ಕಾವೂರು ಠಾಣಾ ಪೊಲೀಸರ ಭೇಟಿ. ನೀಡಿದ್ದು ಪ್ರಕರಣ ದಾಖಲಾಗಿದೆ.

    Share Information
    Advertisement
    Click to comment

    You must be logged in to post a comment Login

    Leave a Reply