Connect with us

    LATEST NEWS

    ತ್ರಿಬಲ್ ರೈಡಿಂಗ್ -ಶಾಲಾ ಬಸ್ಸಿಗೆ ಬೈಕ್ ಡಿಕ್ಕಿ ಇಬ್ಬರು ಕಾಲೇಜು ವಿದ್ಯಾರ್ಥಿಗಳು ಸ್ಥಳದಲ್ಲೇ ಸಾವು !

    ಮಂಜೇಶ್ವರ, ಜನವರಿ 13 :ಬೈಕ್ ಹಾಗೂ ಶಾಲಾ ಬಸ್ ನಡುವೆ ನಡೆದ ಅಪಘಾತದಲ್ಲಿ ಇಬ್ಬರು ವಿಧ್ಯಾರ್ಥಿಗಳು ಸ್ಥಳದಲ್ಲೇ ಸಾವನಪ್ಪರುವ ಘಟನೆ ಇಲ್ಲಿನ ಮೀಯಪದವು ಬಳಿಯ ಬಾಳ್ಯೂರು ಎಂಬಲ್ಲಿ ನಡೆದಿದೆ.


    ಮೃತರನ್ನು ಮೀಯಪದವು ದರ್ಬೆ ನಿವಾಸಿ ಹರೀಶ್ ಎಂಬವರ ಪುತ್ರ ಪ್ರೀತೇಶ್ ಶೆಟ್ಟಿ (21) ಹಾಗೂ ಬೆಜ್ಜಂಗಳ ಸುರೇಶ ಎಂಬವರ ಪುತ್ರ ಅಭಿಷೇಕ್ ಎಂ. (21) ಎಂದು ಗುರುತಿಸಲಾಗಿದೆ. ವಿದ್ಯಾರ್ಥಿಗಳು ಮಂಗಳೂರಿನ ಕಾಲೇಜಿಗೆ ತೆರಳುತ್ತಿದ್ದು, ಮೀಯಪದವು ಕಡೆಯಿಂದ ಹೊಸಂಗಡಿಯತ್ತ ಬರುತ್ತಿದ್ದರು. ಈ ವೇಳೆ, ಶಾಲಾ ಬಸ್ಸಿಗೆ ಮುಖಾಮುಖಿ ಡಿಕ್ಕಿಯಾಗಿದ್ದು ರಸ್ತೆಗಪ್ಪಳಿಸಿ ವಿದ್ಯಾರ್ಥಿಗಳು ಸಾವಿಗೀಡಾಗಿದ್ದಾರೆ. ಇವರು ಮಂಗಳೂರಿನ ಕಾಲೇಜೊಂದರಲ್ಲಿ ಪಿಯುಸಿ ವಿದ್ಯಾರ್ಥಿಗಳಾಗಿದ್ದರು. ಮಂಜೇಶ್ವರ ಪೊಲೀಸರು ಸ್ಥಳಕ್ಕಾಗಮಿಸಿ ತನಿಖೆ ಕೈಗೊಂಡಿದ್ದಾರೆ.

     

    Share Information
    Advertisement
    Click to comment

    You must be logged in to post a comment Login

    Leave a Reply