DAKSHINA KANNADA
ನರಿ ನುಂಗಿದ ಬೃಹತ್ ಹೆಬ್ಬಾವು:ಹಾವು ಹಿಡಿದು ಸೆಲ್ಪಿ ತೆಗೆದ ಗ್ರಾಮಸ್ಥರು!
ನರಿ ನುಂಗಿದ ಬೃಹತ್ ಹೆಬ್ಬಾವು:ಹಾವು ಹಿಡಿದು ಸೆಲ್ಪಿ ತೆಗೆದ ಗ್ರಾಮಸ್ಥರು!
ಪುತ್ತೂರು, ಸೆಪ್ಟೆಂಬರ್ 30 : ಕಡಬ ತಾಲೂಕಿನ ಹಳೆಸ್ಟೇಷನ್ ಸಮೀಪದ ಬೆದ್ರಾಜೆಯಲ್ಲಿ ಬೃಹತ್ ಗಾತ್ರದ ಹೆಬ್ಬಾವು ನರಿಯೊಂದನ್ನು ನುಂಗಲು ಪ್ರಯತ್ನಿಸಿದ್ದು,ಹೆಬ್ಬಾವು ನೋಡಿ ಗ್ರಾಮಸ್ಥರೇ ಬೆಚ್ಚಿ ಬಿದ್ದಿದ್ದಾರೆ.
ಬೆದ್ರಾಜೆಯ ಕುಟ್ಟ ಎಂಬವರ ಮನೆ ಸಮೀಪ ಶುಕ್ರವಾರ ಮುಂಜಾನೆ ಎಂಟು ಗಂಟೆಗೆ ಹೆಬ್ಬಾವು ನರಿಯೊಂದನ್ನು ಹಿಡಿದು ನುಂಗಲು ಯತ್ನಿಸಿದ್ದು, ನರಿ ಮೃತಪಟ್ಟಿದೆ.
ಹೆಬ್ಬಾವನ್ನು ಹಿಡಿಯಲು ಗ್ರಾಮಸ್ಥರ ಕೋರಿಕೆಯ ಮೇರೆಗೆ ಅಶ್ರಪ್ ಪನ್ಯ ಎಂಬವರು ಆಗಮಿಸಿದ್ದು,ಅರಣ್ಯ ಇಲಾಖೆಯ ಸಿಬ್ಬಂದಿಗಳ ಸಹಕಾರದೊಂದಿಗೆ ಬೃಹತ್ ಗಾತ್ರದ ಹಾವನ್ನು ಹಿಡಿದು ಕಾಡಿಗೆ ಬಿಡುವಲ್ಲಿ ಯಶಸ್ವಿಯಾಗಿದ್ದಾರೆ. ಹೆಬ್ಬಾವು ನುಂಗಿದ್ದು ನರಿಯೋ ಅಥವಾ ನಾಯಿಯೊ ಎನ್ನುವುದು ಹಲವು ಜನರಿಗೆ ಅನುಮಾನವಿತ್ತು.
ಗುಡ್ಡದಿಂದ ಹೆಬ್ಬಾವು ನರಿಯನ್ನು ಬೆನ್ನಟ್ಟಿ ಬಂದಿರುವುದನ್ನು ಸ್ಥಳೀಯರೊಬ್ಬರು ಗಮನಿಸಿದ್ದರು.
ಹಾಗಾಗಿ ನರಿಯೇ ಆಗಿರುವುದನ್ನು ಖಚಿತಪಡಿಸಿಕೊಂಡರು.
ಹಾವಿನ ಸುದ್ದಿ ತಿಳಿದು ಗ್ರಾಮದ ಜನರು ಸೇರಿದಂತೆ ಹಲವು ಭಾಗಗಳಿಂದ ಜನ ಆಗಮಿಸಿದಲ್ಲದೆ ,ಹಾವನ್ನು ಹಿಡಿದ ಬಳಿಕ ಪೋಟೋ ತೆಗೆಯಲು ಜನ ಮುಗಿಬಿದ್ದಿದ್ದಾರೆ.
ಅಲ್ಲದೆ ಹಲವು ಜನ ಹಾವನ್ನು ಹಿಡಿದು ಸೆಲ್ಪಿಯೂ ತೆಗೆದಿದ್ದಾರೆ.ಸದ್ಯ ಗ್ರಾಮಸ್ಥರಲ್ಲಿದ್ದ ಆತಂಕ ಈಗ ದೂರವಾಗಿದೆ.
ವಿಡಿಯೋಗಾಗಿ…
You must be logged in to post a comment Login