Connect with us

    BELTHANGADI

    ಬೆಳ್ತಂಗಡಿಯಲ್ಲಿ ಐಟಿಐ ಉಪನ್ಯಾಸಕ ಬರ್ಬರ ಹತ್ಯೆ

    ಬೆಳ್ತಂಗಡಿಯಲ್ಲಿ ಐಟಿಐ ಉಪನ್ಯಾಸಕ ಬರ್ಬರ ಹತ್ಯೆ

    ಬೆಳ್ತಂಗಡಿ ಮೇ 28: ಸರಕಾರಿ ಐಟಿಐ ಕಾಲೇಜಿನ ಉಪನ್ಯಾಸಕರೊಬ್ಬರನ್ನು ನಡು ರಸ್ತೆಯಲ್ಲೇ ಬರ್ಬರವಾಗಿ ಕಡಿದು ಹತ್ಯೆಗೈದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದಿದೆ.

    ಮೃತರನ್ನು ಮಾಲಾಡಿ ಸರಕಾರಿ ಐಟಿಐ ಕಾಲೇಜಿನ ಉಪನ್ಯಾಸಕ ವಿಕ್ರಮ್ ಜೈನ್ (45) ಎಂದು ಗುರುತಿಸಲಾಗಿದೆ. ಬೆಳ್ತಂಗಡಿ ತಾಲೂಕಿನ ವೇಣೂರು ಬಳಿಯ ಮುಂಡೂರು ಗ್ರಾಮದ ಕೋಟಿಕಟ್ಟೆ ಎಂಬಲ್ಲಿ ನಿನ್ನೆ ತಡರಾತ್ರಿ ಘಟನೆ ನಡೆದಿದ್ದು ಕೃತ್ಯದ ಹಿನ್ನೆಲೆ ತಿಳಿದುಬಂದಿಲ್ಲ. ವೇಣೂರು ಠಾಣೆ ಪೊಲೀಸರು ಸ್ಥಳಕ್ಕಾಗಮಿಸಿ, ತನಿಖೆ ನಡೆಸಿದ್ದಾರೆ.

    ವಿಕ್ರಮ್ ಜೈನ್ ನಿನ್ನೆ ರಾತ್ರಿ 10 ಗಂಟೆ ವರೆಗೂ ಮುಂಡೂರಿನಲ್ಲಿ ಯುವಕರ ಜೊತೆಗಿದ್ದರೆಂದು ಸ್ಥಳೀಯರು ತಿಳಿಸಿದ್ದಾರೆ. ಹೊಟ್ಟೆ ಮತ್ತು ತಲೆಯ ಭಾಗಕ್ಕೆ ತಲವಾರಿನಿಂದ ಕಡಿದಿದ್ದು ಕಿಶೋರ್ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.

    ಒಂದು ತಲವಾರು ಶವದ ಬಳಿ ರಸ್ತೆಯಲ್ಲೇ ಬಿದ್ದಿದ್ದರೆ, ಮತ್ತೊಂದು ಹೊಟ್ಟೆಯಲ್ಲೇ ಇತ್ತು. ಅವನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಪರಿಚಿತ ವ್ಯಕ್ತಿಗಳೇ ಹಳೇ ದ್ವೇಷದಿಂದ ಕೊಲೆ ನಡೆಸಿರಬೇಕು ಎನ್ನಲಾಗುತ್ತಿದೆ.

    Share Information
    Advertisement
    Click to comment

    You must be logged in to post a comment Login

    Leave a Reply