Connect with us

    DAKSHINA KANNADA

    ಬೆಳ್ಳಾರೆ – ದುಷ್ಕರ್ಮಿಗಳಿಗೆ ಬಲಿಯಾದ ಬಿಜೆಪಿ ಯುವ ಮುಖಂಡ ಪ್ರವೀಣ್….!!

    ಪುತ್ತೂರು ಜುಲೈ 26: ಅಪರಿಚಿತ ದುಷ್ಕರ್ಮಿಗಳಿಂದ ದಾಳಿಗೊಳಗಾದ ಬಿಜೆಪಿ ಯುವ ಮುಖಂಡ ಚಿಕಿತ್ಸೆ ಫಲಕಾರಿಯಾಗದೇ ಸಾವನಪ್ಪಿದ್ದಾರೆ. ಮೃತರನ್ನು ಪ್ರವೀಣ್ ನೆಟ್ಟಾರು ಎಂದು ಗುರುತಿಸಲಾಗಿದ್ದು,

    ಇವರು ಬೆಳ್ಳಾರೆ ಪೇಟೆಯಲ್ಲಿರುವ ತಮ್ಮ ಕೋಳಿ ಅಂಗಡಿಯನ್ನು ಬಂದ್ ಮಾಡಿ ತೆರಳುತ್ತಿದ್ದ ಸಂದರ್ಭ ದುಷ್ಕರ್ಮಿಗಳ ತಂಡ ಮಾರಕಾಸ್ತ್ರಗಳಿಂದ ಪ್ರವೀಣ್ ಮೇಲೆ ದಾಳಿ ಮಾಡಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಸಾವಪ್ಪಿದ್ದಾರೆ. ಸದ್ಯ ಪೊಲೀಸರು ಪುತ್ತೂರು ನಗರದ ಸೇರಿದಂತೆ ಬೆಳ್ಳಾರೆಯಲ್ಲಿ ಎಲ್ಲಾ ಅಂಗಡಿಗಳನ್ನು ಬಂದ್ ಮಾಡಿಸಿದ್ದಾರೆ.

    ಬೆಳ್ಳಾರೆಯಲ್ಲಿ ವಾರದ ಹಿಂದೆ ಮಸೂದ್ ಎನ್ನುವ ಯುವಕನನ್ನು ಯುವಕರ ತಂಡವೊಂದು ಕೊಲೆ ಮಾಡಿತ್ತು. ಪ್ರವೀಣ್ ರಾಜಕೀಯ ಕ್ಷೇತ್ರದಲ್ಲಿ ಸಕ್ರೀಯರಾಗಿದ್ದರು. ಮತ್ತೊಂದೆಡೆ ಸಾಮಾಜಿಕ ಕ್ಷೇತ್ರದಲ್ಲೂ ಸಕ್ರೀಯರಾಗಿದ್ದ ಪ್ರವೀಣ್ ನೆಟ್ಟಾರು ಅವರ ಮೇಲೆ ಯಾವ ಕಾರಣಕ್ಕೆ ಹೆಲ್ಲೆ ನಡೆದಿದೆ ಎನ್ನುವುದು ಇನ್ನಷ್ಟೇ ತಿಳಿಯಬೇಕಾಗಿದೆ.

    Share Information
    Advertisement
    Click to comment

    You must be logged in to post a comment Login

    Leave a Reply