Connect with us

    LATEST NEWS

    ಬ್ಯಾರಿ ಸಾಹಿತ್ಯ ಅಕಾಡೆಮಿಯ ಗೌರವ ಪ್ರಶಸ್ತಿ ಪ್ರಕಟ

    ಮಂಗಳೂರು ಅ.4: ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯ 2019 ಮತ್ತು 2020ನೇ ಸಾಲಿನ ಗೌರವ ಪ್ರಶಸ್ತಿ ಪ್ರಕಟಿಸಲಾಗಿದೆ. 2019 ಹಾಗೂ 2020ನೇ ಸಾಲಿನ ಗೌರವ ಪ್ರಶಸ್ತಿಗೆ 6 ಮಂದಿ ಹಾಗೂ 2019 ಮತ್ತು 2020 ಗೌರವ ಪುರಸ್ಕಾರಕ್ಕೆ ಒಟ್ಟು 10 ಮಂದಿಯನ್ನು ಆಯ್ಕೆ ಮಾಡಲಾಗಿದೆ ಎಂದು ಅಕಾಡೆಮಿ ಅಧ್ಯಕ್ಷ ರಹೀಂ ಉಚ್ಚಿಲ್ ತಿಳಿಸಿದ್ದಾರೆ.

    2019ನೇ ಸಾಲಿನ ಗೌರವ ಪ್ರಶಸ್ತಿಗೆ ಸಾಹಿತ್ಯ ಕ್ಷೇತ್ರದಲ್ಲಿ ಅಬ್ದುಲ್ ರಹ್ಮಾನ್ ಕುತ್ತೆತ್ತೂರು, ಬ್ಯಾರಿ ಕಲಾ ಕ್ಷೇತ್ರದಲ್ಲಿ ಇಸ್ಮಾಯಿಲ್ ತಣ್ಣೀರುಬಾವಿ ಆಯ್ಕೆಯಾಗಿದ್ದಾರೆ. ಬ್ಯಾರಿ ಸಂಘಟನೆ ಮತ್ತು ಸಮಾಜಸೇವೆಗಾಗಿ ಎಂ.ಅಹ್ಮದ್ ಬಾವ ಮೊಹಿದಿನ್ ಆಯ್ಕೆಯಾಗಿದ್ದಾರೆ.
    2019ನೇ ಸಾಲಿನ ಗೌರವ ಪುರಸ್ಕಾರಕ್ಕೆ ಅಬ್ದುಲ್ ರಝಾಕ್ ಅನಂತಾಡಿ, ಟಿ.ಎಸ್.ಹುಸೈನ್, ಅಬ್ದುಲ್ ಮಜೀದ್ ಸೂರಲ್ಪಾಡಿ, ಆಪತ್ಬಾಂಧವ ಆಸಿಫ್ ಮತ್ತು ಆಲಿಕುಂಞಿ ಪಾರೆ ಆಯ್ಕೆಯಾಗಿದ್ದಾರೆ.

    2020ನೇ ಸಾಲಿನ ಗೌರವ ಪ್ರಶಸ್ತಿಗೆ ಸಾಹಿತ್ಯ ಕ್ಷೇತ್ರದಲ್ಲಿ ಬಶೀರ್ ಅಹ್ಮದ್ ಕಿನ್ಯ, ಕಲಾ ಕ್ಷೇತ್ರದಲ್ಲಿ ವೀಣಾ ಮಂಗಳೂರು ಆಯ್ಕೆಯಾಗಿದ್ದಾರೆ. ಬ್ಯಾರಿ ಸಂಘಟನೆ ಮತ್ತು ಸಮಾಜಸೇವೆಗಾಗಿ ಸಿದ್ದೀಕ್ ಮಂಜೇಶ್ವರ ಆಯ್ಕೆಯಾಗಿದ್ದಾರೆ. 2020ನೇ ಸಾಲಿನ ಗೌರವ ಪುರಸ್ಕಾರಕ್ಕೆ ಡಾ.ಇಸ್ಮಾಯಿಲ್, ಟಿ.ಎ.ಮೊಹಮ್ಮದ್ ಆಸಿಫ್, ಇಲ್ಯಾಸ್ ಮಂಗಳೂರು, ರಾಶ್ ಬ್ಯಾರಿ, ಸಫ್ವಾನ್ ಶಾ ಬಹರೈನ್ ಆಯ್ಕೆಯಾಗಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply