Connect with us

    LATEST NEWS

    ಹಿಂದೂ ಸಂಘಟನೆಯ ಕಾರ್ಯಕರ್ತರ ಮೇಲೆ ತಲವಾರ್ ದಾಳಿ – ಸ್ಥಿತಿ ಗಂಭೀರ

    ಹಿಂದೂ ಸಂಘಟನೆಯ ಕಾರ್ಯಕರ್ತರ ಮೇಲೆ ತಲವಾರ್ ದಾಳಿ – ಸ್ಥಿತಿ ಗಂಭೀರ

    ಮಂಗಳೂರು ಸೆಪ್ಟೆಂಬರ್ 24: ಇಂದು ಬೆಳ್ಳಂಬೆಳಿಗ್ಗೆಯಷ್ಟೇ ತಲವಾರ್ ದಾಳಿ ನಡೆದಿದ್ದ ಮಂಗಳೂರಿನಲ್ಲಿ ಇಂದು ಸಂಜೆ ಮತ್ತೆ ತಲವಾರು ಝಳಪಿಸಿದೆ.

    ಮಂಗಳೂರು ತಾಲೂಕಿನ ಕೈಕಂಬದ ಸೂರಲ್ಪಾಡಿಯಲ್ಲಿ ವ್ಯಕ್ತಿಯೊಬ್ಬನ ಮೇಲೆ ದುಷ್ಕರ್ಮಿಗಳು ತಲವಾರಿನಿಂದ ದಾಳಿ ನಡೆಸಿದ್ದಾರೆ. ಪೊಳಲಿ ನಿವಾಸಿ ಹರೀಶ್ ಶೆಟ್ಟಿ (38) ಹಲ್ಲೆಗೀಡಾದ ವ್ಯಕ್ತಿ ಎಂದು ಗುರುತಿಸಲಾಗಿದೆ.

    ಹರೀಶ್ ಶೆಟ್ಟಿ ಹಿಂದು ಸಂಘಟನೆಯಲ್ಲಿ ಗುರುತಿಸಿಕೊಂಡಿದ್ದ, ಕೈಕಂಬದಲ್ಲಿ ಬಸ್ ಟೈಂ ಕೀಪರ್ ಆಗಿ ಕೆಲಸ ನಿರ್ವಹಿಸುತ್ತಿದ್ದರು.
    ಹಲ್ಲೆ ಗೀಡಾದ ಹರಿಶ್ ಶೆಟ್ಟಿ ಅವರನ್ನು ನಗರದ ಎಜೆ ಆಸ್ಪತ್ರೆಗೆ ದಾಖಲಿಸಲಾಗಿದ್ದು , ಸ್ಥಿತಿ ಚಿಂತಾಜನಕ ಎಂದು ಹೇಳಲಾಗಿದೆ.

    ಇಂದು ಬೆಳಗ್ಗೆಯಷ್ಟೇ ಮೂಡುಬಿದ್ರೆಯಲ್ಲಿ ಇಮ್ತಿಯಾಜ್ ಎಂಬಾತನಿಗೆ ಹಲ್ಲೆ ನಡೆಸಲಾಗಿತ್ತು. ಈ ಹಲ್ಲೆಯಲ್ಲಿ ಇಮ್ತಿಯಾಜ್ ಸ್ವಲ್ಪದರಲ್ಲಿ ಅಪಾಯದಿಂದ ಪಾರಾಗಿದ್ದ. ಈಗ ನಡೆದಿರುವ ದಾಳಿ ಇಮ್ತಿಯಾಜ್ ಮೇಲಿನ ಹಲ್ಲೆಗೆ ಪ್ರತೀಕಾರದಿಂದ ನಡೆದ ದಾಳಿ ಎಂದು ಹೇಳಲಾಗಿದೆ.

    Share Information
    Advertisement
    Click to comment

    You must be logged in to post a comment Login

    Leave a Reply