BANTWAL
ಬಂಟ್ವಾಳ: ಭಾರೀ ಬಿರುಗಾಳಿಗೆ ಮನೆಗಳ ಸಹಿತ ಕೃಷಿ ಭೂಮಿಗೆ ಹಾನಿ
ಮಂಗಳೂರು ಅಕ್ಟೋಬರ್ 3: ಕರಾವಳಿಯಲ್ಲಿ ಸುರಿಯುತ್ತಿರುವ ಭಾರೀ ಮಳೆ ಗಾಳಿಗೆ ಅಪಾರ ಹಾನಿಯುಂಟಾಗಿದೆ. ಬಂಟ್ವಾಳ ತಾಲೂಕಿನ ಕಾವಳ ಮುಡ್ನೂರು,ಬಡಗ ಅಜೆಕ್ಕಾರು ಪ್ರದೇಶದಲ್ಲಿ ಭಾರೀ ಬಿರುಗಾಳಿ ಬೀಸಿದ್ದು, ಹಲವಾರು ವಾಸದ ಮನೆ, ಅಡಿಕೆ ತೋಟ ಸೇರಿದಂತೆ ಅಪಾರ ಪ್ರಮಾಣದ ಆಸ್ತಿ ಪಾಸ್ತಿಗಳಿಗೆ ನಷ್ಟವನ್ನುಂಟು ಮಾಡಿದೆ.
ಬಿರುಗಾಳಿಗೆ ಸುಮಾರು 60 ಎಕ್ರೆ ಪ್ರದೇಶದಲ್ಲಿ ಸಾಕಷ್ಟು ಹಾನಿಯುಂಟಾಗಿದ್ದು, 100ಕ್ಕೂ ಅಧಿಕ ಅಡಿಕೆ ತೋಟಗಳಲ್ಲಿ ಫಸಲು ಬಿಡುವ ಅಡಿಕೆ ಮರಗಳು ಗಾಳಿಯ ರಭಸಕ್ಕೆ ನೆಲಕ್ಕುರುಳಿದೆ. ಸುಮಾರು ಎರಡು ಕೋಟಿಗೂ ಅಧಿಕ ನಷ್ಟ ಉಂಟಾಗಿದೆ.
25ಕ್ಕೂ ಅಧಿಕ ಮೆಸ್ಕಾಂ ಕಂಬಗಳು ನೆಲಕ್ಕುರುಳಿ ಇಡೀ ಗ್ರಾಮ ಕತ್ತಲಲ್ಲಿದೆ. 10ಕ್ಕೂ ಅಧಿಕ ವಾಸದ ಮನೆಗಳಿಗೆ ಹಾನಿಯಾಗಿದೆ ಎಂದು ಸ್ಥಳೀಯ ಗ್ರಾಮಸ್ಥರು ತಿಳಿಸಿದ್ದಾರೆ. ಹಾನಿಯಾದ ಪ್ರದೇಶಗಳಿಗೆ ಕಂದಾಯ, ತೋಟಗಾರಿಕಾ ಇಲಾಖೆಯ ಅಧಿಕಾರಿಗಳು ಹಾಗೂ ಕಾವಳ ಮುಡ್ನೂರು ಗ್ರಾಮ ಪಂಚಾಯತ್ ನ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸುತ್ತಿದ್ದಾರೆ.
You must be logged in to post a comment Login