Connect with us

    BANTWAL

    ಬಂಟ್ವಾಳ – ಯುವಕನ ಕೊಲೆಗೈದು ಸುಟ್ಟುಹಾಕಿ ಪಾತಾಳಕ್ಕೆ ಎಸೆದ ಆರೋಪಿ

    ಬಂಟ್ವಾಳ ನವೆಂಬರ್ 8: ಅನೈತಿಕ ಚಟುವಟಿಕೆಗಾಗಿ ಯುವಕನ್ನು ಗುಡ್ಡಕ್ಕೆ ಕರೆದೊಯ್ದು ಕೊಲೆ ಮಾಡಿ ಆತನನ್ನು ಸುಟ್ಟು ಹಾಕಿ ಗೊಂಡಕ್ಕೆ ಎಸೆದ ಘಟನೆ ವಿಟ್ಲ ಪೊಲೀಸ್ ವ್ಯಾಪ್ತಿಯಲ್ಲಿ ನಡೆದಿದೆ. ಬೋಳಂತೂರು ಗ್ರಾಮದ ನಿವಾಸಿ ಅಬ್ದುಲ್ ಸಮದ್ ಕೊಲೆಯಾದ ಯುವಕ. ಆತನನ್ನು ಅದೇ ಗ್ರಾಮದ ನಿವಾಸಿ ಅಬ್ದುಲ್ ರಹಿಮಾನ್ ಎಂಬಾತ ಕೊಲೆ ಮಾಡಿ ಗುಡ್ಡದಲ್ಲಿರುವ ಪಾತಾಳಕ್ಕೆ ಎಸೆದಿದ್ದಾನೆ ಎಂದು ಹೇಳಲಾಗುತ್ತಿದೆ.


    ಸಮದ್ ಕಾಣೆಯಾಗಿರುವ ಕುರಿತು ಮನೆಯವರು ವಿಟ್ಲ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪೊಲೀಸರು ತನಿಖೆ ನಡೆಸಿದಾಗ ಆತನಿಗೆ ಆರೋಪಿ ರಹಿಮಾನ್ ಜತೆ ಸಂಪರ್ಕ ಇರುವುದು ಪತ್ತೆಯಾಗಿತ್ತು. ಸುಳಿವು ಬೆನ್ನತ್ತಿ ರಹಿಮಾನ್ ನನ್ನು ವಶಕ್ಕೆ ಪಡೆದಾಗ ಇಡೀ ಪ್ರಕರಣ ಬಯಲಾಗಿದೆ. ಬಂಟ್ವಾಳ ಗ್ರಾಮಾಂತರ ಹಾಗೂ ವಿಟ್ಲ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಬಂಟ್ವಾಳ ಪೊಲೀಸರು ಯುವಕನ ಮೃತದೇಹವನ್ನು ಗುಡ್ಡದ ಮೇಲಿನ ಹೊಂಡದಿಂದ ಹೊರ ತೆಗೆಯಲು ಮಂಗಳವಾರ ಕಾರ್ಯಾಚರಣೆ ನಡೆಸಿದ್ದಾರೆ. ಕತ್ತಲಾದರೂ ಶವ ಮೇಲೆತ್ತಲು ಸಾಧ್ಯವಾಗಿಲ್ಲ. ಕಾರ್ಯಾಚರಣೆ ಮುಂದೂಡಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply