LATEST NEWS
ಉಪ್ಪುಂದ – ಹೊಳೆಗೆ ಬಿದ್ದ ಸಾವನಪ್ಪಿದ 2 ವರ್ಷದ ಮಗು….!!
ಉಡುಪಿ ಜುಲೈ 27: ನಿದ್ದೆಗಣ್ಣಲ್ಲಿ ಎದ್ದ 2 ವರ್ಷದ ಮಗುವೊಂದು ಮನೆ ಸಮೀಪ ಇರುವ ಹೊಳೆಗೆ ಬಿದ್ದು ಸಾವನಪ್ಪಿರುವ ಘಟನೆ ಉಪ್ಪುಂದ ಗ್ರಾಮದ ಕರ್ಕಿಕಳಿ ಎಂಬಲ್ಲಿ ನಡೆದಿದೆ.ಮೃತ ಮಗುವನ್ನು ಉಪ್ಪುಂದ ಗ್ರಾಮದ ಕರ್ಕಿಕಳಿ ಚೌಕಿಮನೆ ವಿಶ್ವನಾಥ ಖಾರ್ವಿ ಅವರ ಮಗ ಸರ್ವದ (2) ಎಂದು ಗುರುತಿಸಲಾಗಿದೆ.
ಮಗುವಿನ ತಾಯಿ ಸೋಮವಾರ ಮಧ್ಯಾಹ್ನ ಮಗುವನ್ನು ಮನೆಯ ಕೋಣೆಯಲ್ಲಿ ಮಲಗಿಸಿ ಉಪ್ಪುಂದ ಪೇಟೆಗೆ ಹೋಗಿದ್ದಾರೆ, ಈ ನಡುವೆ ನಿದ್ದೆಯಿಂದ ಎದ್ದ ಮಗು ಮನೆಯಲ್ಲಿ ಯಾರೂ ಕಾಣದ ಹಿನ್ನಲೆ ಮನೆಯಿಂದ ಹೊರಗೆ ಬಂದು ಮನೆಯ ಸಮೀಪ ಹರಿಯುವ ಎಡಮಾವಿನ ಹೊಳೆಯ ದಡದಲ್ಲಿ ನಡೆದುಕೊಂಡು ಹೋಗುವಾಗ ಆಕಸ್ಮಿಕವಾಗಿ ಕಾಲು ಜಾರಿ ಎಡಮಾವಿನ ಹೊಳೆಗೆ ಬಿದ್ದು ನೀರಿನಲ್ಲಿ ಮುಳುಗಿ ಉಸಿರುಗಟ್ಟಿ ಸಾವನಪ್ಪಿದೆ ಎಂದು ಹೇಳಲಾಗಿದ್ದು,
ಮಗುವಿನ ಮೃತದೇಹವು ತೇಲಿಕೊಂಡು ಹೋಗಿ ಎಡಮಾವಿನ ಹೊಳೆಯು ಸಮುದ್ರವನ್ನು ಸೇರುವ ಉಪ್ಪುಂದ-ಕರ್ಕಿಕಳಿ ಬ್ರೇಕ್ ವಾಟರ್ ಸಮೀಪ ನೀರಿನಲ್ಲಿ ದೊರೆತಿದೆ. ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
You must be logged in to post a comment Login