Connect with us

    FILM

    ಆಝಾನ್ ವಿರುದ್ದ ಅಪಸ್ವರವೆತ್ತಿದವರ ವಿರುದ್ದ ಸಿಡಿದೆದ್ದ ಹುಚ್ಚ ವೆಂಕಟ್..

    ಬೆಂಗಳೂರು, ಜುಲೈ 29 : ಆಝಾನ್ ವಿರುದ್ದ ಅಪಸ್ವರ ಎತ್ತಿದವರ ವಿರುದ್ದ ಫಯರಿಂಗ್ ಸ್ಟಾರ್ ಹುಚ್ಚ ವೆಂಕಟ್ ಸಿಡಿದೆದಿದ್ದಾರೆ…!! ಮುಸ್ಲೀಮರು ಮುಂಜಾನೆ ಮಾಡುವ ಆಜಾನ್ ಗೆ ಅಪಸ್ವರ ತೆಗೆದ ಖ್ಯಾತ ಗಾಯಕಿ ಸುಚಿತ್ರ ಕೃಷ್ಣ ಮೂರ್ತಿ, ಸೋನು ನಿಗಂ ವಿರುದ್ದ ಹುಚ್ಚ ವೆಂಕಟ್ ಸಿಡಿದೆದ್ದಿದ್ದಾರೆ. ಮುಂಜಾನೆ ಮುಸ್ಲೀಂ ಬಂಧುಗಳು ಆಝಾನ್ ಹೇಳುವುದು ಸಾಮಾನ್ಯ, ಇದರಿಂದ ಯಾರಿಗಾದರೂ ತೊಂದರೆ ಆಗುತ್ತದೆ ಎಂದರೆ ಸರಿ ಅಲ್ಲ ಎಂದ ಅವರು ಇದರಿಂದ ನೆಮ್ಮದಿ ಹಾಳಾಗುತ್ತದೆ ಎಂದ ಸುಚಿತ್ರ ಕೃಷ್ಣ ಮೂರ್ತಿ, ಸೋನು ನಿಗಂ ಅವರು ನಾಡು ಬಿಟ್ಟು ಕಾಡಿನಲ್ಲಿ ಪ್ರಾಣಿಗಳೊಂದಿಗೆ ವಾಸ ಮಾಡುವುದೇ ಸೂಕ್ತ ಎಂದು ಸಲಹೆ ಮಾಡಿದ್ದಾರೆ. ನಾವು ಬೇಳಗ್ಗೆ ಎದ್ದು ದೇವಸ್ಥಾನಕ್ಕೆ ಹೋಗುತ್ತೇವೆ, ಪ್ರಾರ್ಥನೆ ಮಾಡುತ್ತೇವೆ, ದೇವಸ್ಥಾನದ ಗಂಟೆ ಬಾರಿಸುತ್ತೇವೆ. ಮುಸ್ಲೀಂ ಬಂಧುಗಳು ಯಾವತ್ತಾದರೂ ಈ ಬಗ್ಗೆ ತಕರಾರೂ ಎತ್ತಿದ್ದಾರೆಯೇ ಎಂದು ಹುಚ್ಚ ವೆಂಕಟ್ ತರಾಟೆಗೆ ತೆಗೆದುಕೊಂಡಿದ್ದಾರೆ.. ಹುಚ್ಚ ವೆಂಕಟ್ ನ ಅಬ್ಬರದ ಮಾತುಗಳ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಈಗ ವೈರಲ್ ಆಗಿದೆ..
    ಹುಚ್ಚ ವೆಂಕಟ್ ಮಾಡಿದ ಫಯರಿಂಗ್ ನ ಸಂಪೂರ್ಣ ವಿಡಿಯೋಗಾಗಿ ಕ್ಲಿಕ್ ಮಾಡಿರಿ…

    Share Information
    Advertisement
    Click to comment

    You must be logged in to post a comment Login

    Leave a Reply