KARNATAKA
ಟೋಯಿಂಗ್ ವಿಚಾರಕ್ಕೆ ನಡುರಸ್ತೆಯಲ್ಲಿ ಅಂಗವಿಕಲೆಯನ್ನು ತುಳಿದು ಹಲ್ಲೆ ನಡೆಸಿದ ಎಎಸ್ಐ
ಬೆಂಗಳೂರು ಜನವರಿ 30 : ಬೆಂಗಳೂರಿನಲ್ಲಿ ಟೋಯಿಂಗ್ ವಿಚಾರ ಮತ್ತೆ ಸುದ್ದಿಯಲ್ಲಿದ್ದು, ಇದೀಗ ಟೋಯಿಂಗ್ ವಿಚಾರಕ್ಕೆ ಎಎಸ್ಐ ಒಬ್ಬರು ಅಂಗವಿಕಲೆ ಮಹಿಳೆಯ ಮೇಲೆ ನಡು ರಸ್ತೆಯಲ್ಲಿ ಹಲ್ಲೆ ನಡೆಸಿದ್ದಾರೆ.
ಹಲ್ಲೆಗೊಳಗಾದ ಮಹಿಳೆಯನ್ನು ಮಂಜುಳಾ ಎಂದು ಗುರುತಿಸಲಾಗಿದ್ದು, ಇವರು ನೋ ಪಾರ್ಕಿಂಗ್ನಲ್ಲಿ ತಮ್ಮ ವಾಹನವನ್ನು ನಿಲ್ಲಿಸಿದ್ದರು. ಈ ಬಗ್ಗೆ ಪ್ರಶ್ನಿಸಿದ್ದ ಟೋಯಿಂಗ್ ಸಿಬ್ಬಂದಿ ಜತೆ ಮಂಜುಳಾ ವಾಗ್ವಾದ ನಡೆಸಿದ್ದಾರೆ ಅಲ್ಲದೇ ಎಎಸ್ಐ ನಾರಾಯಣ್ ಮೇಲೆ ಕಲ್ಲಿನಿಂದ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಇದರಿಂದ ಗಾಯಗೊಂಡ ಎಎಸ್ಐ ಕೋಪಗೊಂಡು ಮಹಿಳೆಗೆ ಶೂ ಕಾಲಿನಿಂದ ತುಳಿದಿದ್ದಾರೆ. ಪಾರ್ಕಿಂಗ್ ವಿಚಾರಕ್ಕೆ ನಡು ರಸ್ತೆಯಲ್ಲಿ ಮಾರಾಮಾರಿ ನಡೆದಿದೆ. ಅಂಗವಿಕಲ ಮಹಿಳೆಯನ್ನು ಎಎಸ್ಐ ಮನಬಂದಂತೆ ಥಳಿಸಿದ್ದಾರೆ.
ಎಎಸ್ಐ ನಾರಾಯಣ್ ಕಣ್ಣಿನ ಬಲಿ ಗಾಯವಾಗಿದ್ದು ಕೋಪಗೊಂಡ ಪೋಲೀಸ್ ನಡುರಸ್ತೆಯಲ್ಲೇ ಮಹಿಳಗೆ ಥಳಿಸಿದ್ದಾರೆ. ಸ್ಥಳದಲ್ಲಿದ್ದ ಸಾರ್ವಜನಿಕರು ಪೋಲಿಸ್ ಮತ್ತು ಅಂಗವಿಕಲ ಮಹಿಳೆ ನಡುವಿನ ಜಗಳವನ್ನು ತಡೆಯಲು ಯತ್ನಸಿದ್ದಾರೆ. ಈ ಸಂಬಂಧ ಎಸ್ ಜೆ ಪಾರ್ಕ್ ಪೊಲೋಇಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
You must be logged in to post a comment Login