Connect with us

    LATEST NEWS

    ಜಲೀಲ್ ಕೊಲೆಗೆ ಮುಖ್ಯಮಂತ್ರಿ ಬೊಮ್ಮಾಯಿಯವರ ಪ್ರತೀಕಾರದ ಹೇಳಿಕೆಯೇ ಕಾರಣ

    ಮಂಗಳೂರು ಡಿಸೆಂಬರ್ 25: ಸುರತ್ಕಲ್ ಕಾಟಿಪಳ್ಳದ ಜಲೀಲ್ ಕೊಲೆಗೆ ಮುಖ್ಯಮಂತ್ರಿ ಬೊಮ್ಮಾಯಿಯವರ ಪ್ರತೀಕಾರದ ಹೇಳಿಕೆಯೇ ಕಾರಣ ಎಂದು ದಕ್ಷಿಣಕನ್ನಡ ಮುಸ್ಲಿಂ ಒಕ್ಕೂಟದ ಅಧ್ಯಕ್ಷ ಅಶ್ರಫ್ ಆರೋಪಿಸಿದ್ದಾರೆ.


    ಮಾಧ್ಯಮಗಳ ಜೊತೆ ಮಾತನಾಡಿದ ಅವರು ಯಾವಾಗ ಮುಖ್ಯಮಂತ್ರಿಗಳು ಕ್ರಿಯೆಗೆ ಪ್ರತಿಕ್ರಿಯೆ ಎನ್ನುವ ಹೇಳಿಕೆ ನೀಡಿದರೋ ಆ ಬಳಿಕ ದಕ್ಷಿಣಕನ್ನಡ ಜಿಲ್ಲೆಯಲ್ಲಿ ನಿರಂತರ ಕೊಲೆಗಳು ನಡೆಯುತ್ತಿವೆ. ಮುಸ್ಲಿಮರ ಮೇಲೆ ನೈತಿಕ ಪೋಲೀಸ್ ಗಿರಿ, ಹಲ್ಲೆಗಳು ಹೆಚ್ಚಾಗುತ್ತಿದೆ. ಕೆಲವು ಸಂಘಟನೆಗಳು ಕಾನೂನನ್ನು ಕೈಗೆತ್ತಿಕೊಳ್ಳುತ್ತಿವೆ. ಕೊಲೆಗಳನ್ನು ನಡೆಸಿ ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಸರಕಾರ ಪ್ರಯತ್ನಿಸುತ್ತಿದೆ ಎಂದರು.

    ಆದರೆ ನಾವು ಈ ಪ್ರಯತ್ನ ಸಫಲವಾಗಲು ಬಿಡುವುದಿಲ್ಲ, ನಾವು ಶಾಂತಿಯಿಂದಲೇ ಕಾನೂನು ಮೂಲಕವೇ ಎದುರಿಸುತ್ತೇವೆ. ಮುಖ್ಯಮಂತ್ರಿ ಮಂಗಳೂರಿಗೆ ಆಗಮಿಸುತ್ತಿದ್ದ ಈ ಬಾರಿ ಕೊಲೆಗೀಡಾದ ಜಲೀಲ್ ಮನೆಗೆ ಭೇಟಿ ನೀಡಬೇಕು, ಜಲೀಲ್ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕು ಎಂದು ಅಶ್ರಫ್ ಆಗ್ರಹಿಸಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply