Connect with us

    LATEST NEWS

    ಉದ್ಯಮಿ ಮನೆಯಲ್ಲಿ 150 ಕೋಟಿ ಗೂ ಅಧಿಕ ಹಣ ಪತ್ತೆ – ನೋಟು ಎಣಿಸಲು ಹೋದ ಅಧಿಕಾರಿಗಳೇ ಸುಸ್ತು…!!

    ಲಖನೌ: ಉತ್ತರ ಪ್ರದೇಶದ ಉದ್ಯಮಿಯೊಬ್ಬರ ಮನೆ ಮೇಲೆ ದಾಳಿ ನಡೆಸಿದ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು 150 ಕೋಟಿ ಗೂ ಅಧಿಕ ಹಣವನ್ನು ವಶಕ್ಕೆ ಪಡೆದಿದ್ದಾರೆ.


    ಸುಗಂಧ ದ್ರವ್ಯ ಉದ್ಯಮಿಯೊಬ್ಬರ ಮೇಲೆ ಜಿಎಸ್ ಟಿ ಅಕ್ರಮಕ್ಕೆ ಸಂಬಂಧಿಸಿದಂತೆ ಈ ದಾಳಿ ನಡೆದಿದೆ. ಉದ್ಯಮಿಯ ಮನೆಯ ಎರಡು ವಾರ್ಡ್‌ರೋಬ್‌ಗಳಲ್ಲಿ ಎರಡು ಚಿಕ್ಕ ಗುಡ್ಡಗಳ ರೀತಿ ಹಣವನ್ನು ಜೋಡಿಸಿಡಲಾಗಿದ್ದು, ನೋಟಿನ ಬಂಡಲ್‌ಗಳನ್ನು ಪ್ಲಾಸ್ಟಿಕ್ ಪೇಪರ್‌ನಲ್ಲಿ ಸುತ್ತಿ, ಹಳದಿ ಟೇಪ್ ಮೂಲಕ ಕಟ್ಟಿ ಇಡಲಾಗಿತ್ತು. ಅಂತಹ 30ಕ್ಕೂ ಹೆಚ್ಚು ದೊಡ್ಡ ದೊಡ್ಡ ಬಂಡಲ್‌ಗಳು ಚಿತ್ರದಲ್ಲಿ ಕಂಡುಬಂದಿವೆ.


    ಹಣ ಎಣಿಸಲು ಅಧಿಕಾರಿಗಳು ಕೊಠಡಿಯ ಚಾಪೆ ಮೇಲೆ ಹಣವನ್ನು ಹರಡಿರುವ ಅಧಿಕಾರಿಗಳು 3 ಹಣ ಎಣಿಕೆ ಯಂತ್ರಗಳನ್ನು ಬಳಸಿ ಎಣಿಕೆ ಮಾಡುತ್ತಿದ್ದಾರೆ. ಉದ್ಯಮಿ ಪಿಯೂಷ್ ಜೈನ್ ಅವರು, ಒಡೊಕೆಮ್ ಕೈಗಾರಿಕೆ ಹೊಂದಿದ್ದು, ಈ ಕಂಪನಿಯು ಸುಗಂಧ ದ್ರವ್ಯಕ್ಕೆ ಸಂಬಂಧಿಸಿದ ಉತ್ಪನ್ನವನ್ನು ಹಲವು ಕಂಪನಿಗಳಿಗೆ ಸರಬರಾಜು ಮಾಡುತ್ತದೆ. ಕಾನ್ಪುರ ಮಾತ್ರವಲ್ಲದೆ, ಉದ್ಯಮಿಗೆ ಸಂಬಂಧಿಸಿದ ಮುಂಬೈ, ಗುಜರಾತ್‌ನ ಸ್ಥಳಗಳ ಮೇಲೂ ಐಟಿ ದಾಳಿ ನಡೆಸಿದೆ.

    Share Information
    Advertisement
    Click to comment

    You must be logged in to post a comment Login

    Leave a Reply