Connect with us

    LATEST NEWS

    ನವದೆಹಲಿಯ ಮುಖ್ಯಮಂತ್ರಿ ಮಗಳಿಗೇ ಪಂಗನಾಮ!

    ನವದೆಹಲಿ, ಫೆಬ್ರವರಿ 09: ಇತ್ತೀಚಿನ ದಿನಗಳಲ್ಲಿ ಆನ್ಲೈನ್ ನಲ್ಲಿ ಮಾರುಕಟ್ಟೆಯನ್ನು ನಂಬಿ ಮೋಸ ಹೋಗುವವರ ಸಂಖ್ಯೆ ದಿನೇ ದಿನೇ ಜಾಸ್ತಿ ಆಗುತಿದ್ದೆ , ರಾಷ್ಟ್ರ ರಾಜಧಾನಿ ನವದೆಹಲಿಯ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್​ ಅವರ ಮಗಳಿಗೆ ಯಾರೋ ಖದೀಮರು ಪಂಗನಾಮ ಹಾಕಿದ್ದಾರೆ. ಆನ್​​ಲೈನ್​ ಮಾರುಕಟ್ಟೆಯನ್ನು ನಂಬಿದ್ದ ಅವರಿಗೆ 34 ಸಾವಿರ ರೂಪಾಯಿ ಮೋಸ ಮಾಡಲಾಗಿದೆ.

    ಹರ್ಷಿತಾ ಕೇಜ್ರಿವಾಲ್​ ಒಎಲ್​ಎಕ್ಸ್​ನಲ್ಲಿ ಸೋಫಾ ಮಾರಾಟಕ್ಕೆ ಹಾಕಿದ್ದರಂತೆ. ಯಾರೋ ಒಬ್ಬ ಖದೀಮ ಅದನ್ನು ಕೊಳ್ಳುವುದಾಗಿ ಹೇಳಿದ್ದಾನೆ. ಆಕೆಗೆ ನಂಬಿಕೆ ಬರಲೆಂದು ಸ್ವಲ್ಪ ಹಣವನ್ನೂ ಆಕೆಯ ಖಾತೆಗೆ ಹಾಕಿದ್ದಾನೆ. ಅದಾದ ನಂತರ ಬಾರ್​ ಕೋಡ್​ ಒಂದನ್ನು ಆಕೆಗೆ ಕಳುಹಿಸಿ ಸ್ಕ್ಯಾನ್​ ಮಾಡಲು ಹೇಳಿದ್ದಾನೆ.

    ಆ ಕೋಡ್​ ಸ್ಕ್ಯಾನ್​ ಮಾಡಿದ ಹರ್ಷಿತಾ ಬ್ಯಾಂಕ್​ ಖಾತೆಯಿಂದ ಇದ್ದಕ್ಕಿದ್ದಂತೆ ಎರಡು ಬಾರಿ ಹಣ ವಿತ್​ಡ್ರಾ ಆಗಿದೆ. ಒಮ್ಮೆ 20 ಸಾವಿರ ಮತ್ತೊಮ್ಮೆ 14 ಸಾವಿರ ರೂಪಾಯಿ ವಿತ್​ ಡ್ರಾ ಆಗಿದೆ. ಈ ವಿಚಾರವಾಗಿ ಮುಖ್ಯಮಂತ್ರಿಗಳ ನಿವಾಸದ ಸನಿಹವಿರುವ ಸಿವಿಲ್​ ಲೈನ್ಸ್​ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ಖದೀಮರ ಹುಡುಕಾಟದಲ್ಲಿದ್ದಾರೆ ಪೊಲೀಸರು.

    Share Information
    Advertisement
    Click to comment

    You must be logged in to post a comment Login

    Leave a Reply