LATEST NEWS
ನವದೆಹಲಿಯ ಮುಖ್ಯಮಂತ್ರಿ ಮಗಳಿಗೇ ಪಂಗನಾಮ!
ನವದೆಹಲಿ, ಫೆಬ್ರವರಿ 09: ಇತ್ತೀಚಿನ ದಿನಗಳಲ್ಲಿ ಆನ್ಲೈನ್ ನಲ್ಲಿ ಮಾರುಕಟ್ಟೆಯನ್ನು ನಂಬಿ ಮೋಸ ಹೋಗುವವರ ಸಂಖ್ಯೆ ದಿನೇ ದಿನೇ ಜಾಸ್ತಿ ಆಗುತಿದ್ದೆ , ರಾಷ್ಟ್ರ ರಾಜಧಾನಿ ನವದೆಹಲಿಯ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರ ಮಗಳಿಗೆ ಯಾರೋ ಖದೀಮರು ಪಂಗನಾಮ ಹಾಕಿದ್ದಾರೆ. ಆನ್ಲೈನ್ ಮಾರುಕಟ್ಟೆಯನ್ನು ನಂಬಿದ್ದ ಅವರಿಗೆ 34 ಸಾವಿರ ರೂಪಾಯಿ ಮೋಸ ಮಾಡಲಾಗಿದೆ.
ಹರ್ಷಿತಾ ಕೇಜ್ರಿವಾಲ್ ಒಎಲ್ಎಕ್ಸ್ನಲ್ಲಿ ಸೋಫಾ ಮಾರಾಟಕ್ಕೆ ಹಾಕಿದ್ದರಂತೆ. ಯಾರೋ ಒಬ್ಬ ಖದೀಮ ಅದನ್ನು ಕೊಳ್ಳುವುದಾಗಿ ಹೇಳಿದ್ದಾನೆ. ಆಕೆಗೆ ನಂಬಿಕೆ ಬರಲೆಂದು ಸ್ವಲ್ಪ ಹಣವನ್ನೂ ಆಕೆಯ ಖಾತೆಗೆ ಹಾಕಿದ್ದಾನೆ. ಅದಾದ ನಂತರ ಬಾರ್ ಕೋಡ್ ಒಂದನ್ನು ಆಕೆಗೆ ಕಳುಹಿಸಿ ಸ್ಕ್ಯಾನ್ ಮಾಡಲು ಹೇಳಿದ್ದಾನೆ.
ಆ ಕೋಡ್ ಸ್ಕ್ಯಾನ್ ಮಾಡಿದ ಹರ್ಷಿತಾ ಬ್ಯಾಂಕ್ ಖಾತೆಯಿಂದ ಇದ್ದಕ್ಕಿದ್ದಂತೆ ಎರಡು ಬಾರಿ ಹಣ ವಿತ್ಡ್ರಾ ಆಗಿದೆ. ಒಮ್ಮೆ 20 ಸಾವಿರ ಮತ್ತೊಮ್ಮೆ 14 ಸಾವಿರ ರೂಪಾಯಿ ವಿತ್ ಡ್ರಾ ಆಗಿದೆ. ಈ ವಿಚಾರವಾಗಿ ಮುಖ್ಯಮಂತ್ರಿಗಳ ನಿವಾಸದ ಸನಿಹವಿರುವ ಸಿವಿಲ್ ಲೈನ್ಸ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ಖದೀಮರ ಹುಡುಕಾಟದಲ್ಲಿದ್ದಾರೆ ಪೊಲೀಸರು.
You must be logged in to post a comment Login