Connect with us

    LATEST NEWS

    ಕೊಲೆ ಪ್ರಕರಣದಲ್ಲಿ ಅರೆಸ್ಟ್ ಆದ ಹುಂಜ…!?

    ತೆಲಂಗಾಣ, ಫೆಬ್ರವರಿ 28:  ಕೋಳಿ ಕಾಳಗದಲ್ಲಿ ಭಾಗಿಯಾಗಿದ್ದ ಹುಂಜವೊಂದು ತನ್ನ 45 ವರ್ಷದ ಮಾಲೀಕನ ಕೊಲೆಗೆ ಕಾರಣವಾಗಿದ್ದು ಈ ಪ್ರಕರಣ ಸಂಬಂಧ ಪೊಲೀಸರು ಹುಂಜವನ್ನೇ ಕಸ್ಟಡಿಗೆ ತೆಗೆದುಕೊಂಡ ವಿಚಿತ್ರ ಘಟನೆ ತೆಲಂಗಾಣ ರಾಜ್ಯದಲ್ಲಿ ವರದಿಯಾಗಿದೆ.

    ಜಗ್ತಿಯಲ್​ ಜಿಲ್ಲೆಯ ಲೋಥುನುರ್​ ಗ್ರಾಮದ ಯಲ್ಲಮ್ಮ ದೇವಸ್ಥಾನದಲ್ಲಿ ಫೆಬ್ರವರಿ 22ರಂದು ಈ ಘಟನೆ ನಡೆದಿದೆ. ಥನುಗುಲ್ಲ ಸತೀಶ್​ ಎಂಬಾತ ಕಾನೂನು ನಿರ್ಬಂಧದ ಬಳಿಕವೂ ಕೋಳಿ ಕಾಳಗಕ್ಕೆ ಹುಂಜವೊಂದನ್ನ ತಂದಿದ್ದ. ಕೋಡಿ ಕತ್ತಿ ಎಂದೇ ಕರೆಯಲಾಗುವ ಚಾಕುವನ್ನ ಹುಂಜದ ಕಾಲಿಗೆ ಬಲವಾಗಿ ಕಟ್ಟಿದ್ದ. ಆದರೆ ಇದೇ ಸತೀಶ್​ ಜೀವಕ್ಕೆ ಸಂಚಕಾರವಾಗಿ ಪರಿಣಮಿಸಿದೆ.

    ಈ ಚಾಕು ಅಕಸ್ಮಾತ್​ ಆಗಿ ಸತೀಶ್​ ತೊಡೆ ಸಂಧುವಿನಲ್ಲಿ ಬಲವಾದ ಗಾಯವನ್ನ ಮಾಡಿದೆ. ತೀವ್ರ ಗಾಯಗೊಂಡ ಸತೀಶ್​ರನ್ನ ಆಸ್ಪತ್ರೆಗೆ ದಾಖಲು ಮಾಡಿದರು ಚಿಕಿತ್ಸೆ ಫಲಕಾರಿಯಾಗದೇ ಸತೀಶ್​ ಸಾವನ್ನಪ್ಪಿದ್ದಾರೆ. ತೆಲಂಗಾಣದಲ್ಲಿ ಕೋಳಿ ಕಾಳಗಕ್ಕೆ ನಿರ್ಬಂಧ ಹೇರಲಾಗಿದ್ದರು ಸಹ ಕೆಲವಷ್ಟು ಮಂದಿ ಸೇರಿಕೊಂಡು ಯಲ್ಲಮ್ಮ ದೇವಸ್ಥಾನದ ಬಳಿಯಲ್ಲಿ ಅಕ್ರಮವಾಗಿ ಕೋಳಿ ಕಾಳಗವನ್ನ ಏರ್ಪಡಿಸಿದ್ದರು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಹುಂಜವನ್ನ ಗೊಲ್ಲಾಪಲ್ಲಿ ಪೊಲೀಸ್​ ಠಾಣೆಗೆ ಕರೆದುಕೊಂಡು ಬಂದಿದ್ದಾರೆ. ಈ ಕೋಳಿಯನ್ನ ಬಂಧಿಸಿಟ್ಟ ಪೊಲೀಸರು ಅದಕ್ಕೆ ಬೇಕಾದ ಆಹಾರವನ್ನ ಒದಗಿಸುತ್ತಿದ್ದಾರೆ. ಇದರ ಜೊತೆಯಲ್ಲಿ ಒಬ್ಬ ಕೋಳಿ ಕಾಳಗ ಆಯೋಜಕನನ್ನೂ ಪೊಲೀಸರು ಬಂಧಿಸಿದ್ದಾರೆ.

    ಈ ಘಟನೆ ಬಳಿಕ ಸ್ಥಳೀಯ ಮಾಧ್ಯಮಗಳಲ್ಲಿ ಪೊಲೀಸರು ಕೋಳಿಯನ್ನ ಬಂಧಿಸಿದ್ದಾರೆ ಅಥವಾ ವಶಕ್ಕೆ ಪಡೆದಿದ್ದಾರೆ ಎಂದು ವರದಿಯಾಗಿದೆ. ಆದರೆ ಈ ಎಲ್ಲಾ ವರದಿಗಳನ್ನ ತಳ್ಳಿ ಹಾಕಿದ ಗೊಲ್ಲಪಲ್ಲಿ ಎಸ್​​ಹೆಚ್​ಓ ಬಿ. ಜೀವನ್​, ನಾವು ಹುಂಜವನ್ನ ಬಂಧಿಸಿಯೂ ಇಲ್ಲ, ವಶಕ್ಕೂ ಪಡೆದಿಲ್ಲ. ಬದಲಾಗಿ ಅದನ್ನ ರಕ್ಷಿಸಿದ್ದೇವೆ ಹಾಗೂ ಫಾರ್ಮ್​ಹೌಸ್​ಗೆ ರವಾನಿಸಿದ್ದೇವೆ ಎಂದು ಸ್ಪಷ್ಟೀಕರಣ ನೀಡಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply