Connect with us

    LATEST NEWS

    ಸೇನಾ ಹೆಲಿಕಾಪ್ಟರ್‌ ಪತನ: ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಸ್ಥಿತಿ ಚಿಂತಾಜಕ, ನಾಲ್ವರ ಸಾವು, ಉಳಿದವರಿಗಾಗಿ ಶೋಧ

    ಚೆನ್ನೈ, ಡಿಸೆಂನರ್ 08: ಭಾರತೀಯ ಸೇನಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಅವರಿದ್ದ ಸೇನಾ ಹೆಲಿಕಾಪ್ಟರ್ ತಮಿಳುನಾಡಿನ ಕುನೂರಿನಲ್ಲಿ ಪತನಗೊಂಡಿದ್ದು, ನಾಲ್ವರ ಮೃತದೇಹ ಪತ್ತೆಯಾಗಿದೆ. ಬಿಪಿನ್​ ರಾವತ್​ ಅವರ ಸ್ಥಿತಿ ಚಿಂತಾಜನಕವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.

    ಭಾರತೀಯ ರಕ್ಷಣಾ ಪಡೆಯ ಮುಖ್ಯಸ್ಥ ಬಿಪಿನ್ ರಾವತ್ ಸೇರಿದಂತೆ ಹಿರಿಯ ಅಧಿಕಾರಿಗಳು ಸಂಚರಿಸುತ್ತಿದ್ದ ಸೇನಾ ಹೆಲಿಕಾಪ್ಟರ್ ಪಥನಗೊಂಡಿರುವ ಘಟನೆ ಇಂದು ಮಧ್ಯಾಹ್ನ ನಡೆದಿದೆ. ತಮಿಳುನಾಡಿನ ಊಟಿ ಸನಿಹದ ಕೂಲೂರು ಬಳಿಯಲ್ಲಿ ಹೆಲಿಕಾಪ್ಟರ್ ಪಥನಗೊಂಡಿದ್ದು, ದುರ್ಘಟನೆಗೆ ಕಾರಣ ತಿಳಿದುಬಂದಿಲ್ಲ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.

    ಬಿಪಿನ್ ರಾವತ್ ಅವರೊಂದಿಗೆ ಅವರ ಪತ್ನಿ, ಕುಟುಂಬಸ್ಥರು ಹಾಗೂ ಹಿರಿಯ ಅಧಿಕಾರಿಗಳು ಇದ್ದರು. ವಿಷಯ ತಿಳಿದಾಕ್ಷಣ ರಕ್ಷಣಾ ಕಾರ್ಯಾಚರಣೆ ನಡೆಸಲಾಗಿದೆ. ಅವರ ಪತ್ನಿ ಮಧುಲಿಕಾ ಸೇರಿ ಈವರೆಗೆ ಮೂವರನ್ನು ರಕ್ಷಿಸಲಾಗಿದ್ದು, ಉಳಿದವರಿಗಾಗಿ ಶೋಧಕಾರ್ಯ ನಡೆಯುತ್ತಿದೆ.

    ನೀಲಗಿರಿ ತಪ್ಪಲಿನಲ್ಲಿ ಹೆಲಿಕಾಪ್ಟರ್‌ ದುರಂತ ಸಂಭವಿಸಿದ್ದು, ಹೆಲಿಕಾಪ್ಟರ್‌ನಲ್ಲಿ 14 ಜನ ಇದ್ದರು ಎನ್ನಲಾಗಿದೆ. ಎಂಐ-17 ಹೆಲಿಕಾಪ್ಟರ್‌ ಸುಳೂರು ವಾಯು ನೆಲೆಯಿಂದ ವೆಲ್ಲಿಂಗ್ಟನ್‌ ಸೇನಾ ಕಾಲೇಜಿಗೆ ಬಿಪಿನ್‌ ರಾವತ್‌ ತೆರಳುತ್ತಿದ್ದರು. ಈಗಾಗಲೇ ಹೆಲಿಕಾಪ್ಟರ್‌ ಪತನದ ಬಗ್ಗೆ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮಾಹಿತಿ ನೀಡಿದ್ದಾರೆ.

    ಹೆಲಿಕಾಪ್ಟರ್‌ನಲ್ಲಿ ಜನರಲ್‌ ಬಿಪಿನ್‌ ರಾವತ್‌, ಅವರ ಪತ್ನಿ ಮಧುಮಿಕಾ ರಾವತ್‌, ಸೇನಾ ಸಹಾಯಕ, ಭದ್ರತಾ ಕಮಾಂಡೋಗಳು ಮತ್ತು ಐಎಎಫ್‌ ಪೈಲಟ್‌ಗಳು ಸೇರಿ 14 ಜನ ಇದ್ದರು ಎಂದು ಮೂಲಗಳು ತಿಳಿಸಿವೆ. ಮಧ್ಯಾಹ್ನ 12.20ಕ್ಕೆ ಘಟನೆ ನಡೆದಿದ್ದು, ಅವಘಡ ಸ್ಥಳಕ್ಕೆ ಸ್ಥಳೀಯ ಸೇನಾ ಅಧಿಕಾರಿಗಳು ತಲುಪುವ ಹೊತ್ತಿಗೆ ಶೇ.80ರಷ್ಟು ಸುಟ್ಟ ಇಬ್ಬರನ್ನು ಸ್ಥಳೀಯ ಆಸ್ಪತ್ರೆಗೆ ಸ್ಥಳೀಯರು ದಾಖಲಿಸಿದ್ದರು.

    Share Information
    Advertisement
    Click to comment

    You must be logged in to post a comment Login

    Leave a Reply