Connect with us

    BELTHANGADI

    ಬೆಳ್ತಂಗಡಿ ಗುರುವಾಯನಕೆರೆಗೆ ಹಾರಿ ವ್ಯಕ್ತಿಯೊಬ್ಬ ಆತ್ಮಹತ್ಯೆ

    ಬೆಳ್ತಂಗಡಿ ಗುರುವಾಯನಕೆರೆಗೆ ಹಾರಿ ವ್ಯಕ್ತಿಯೊಬ್ಬ ಆತ್ಮಹತ್ಯೆ

    ಮಂಗಳೂರು ಆಗಸ್ಟ್ 06: ಬೆಳ್ತಂಗಡಿ ಯ ಗುರುವಾಯನ ಕೆರೆಗೆ ವ್ಯಕ್ತಿಯೊಬ್ಬ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಬೆಳ್ತಂಗಡಿ ತಾಲೂಕು ಕುವೆಟ್ಟು ಗ್ರಾಮದ ಗುರುವಾಯನಕೆರೆಯಲ್ಲಿ ಈ ಘಟನೆ ನಡೆದಿದೆ.

    ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ ಗುರುವಾಯನ ಕೆರೆ ಬಳಿಯ ಶಕ್ತಿನಗರದ ನಿವಾಸಿ ಸುಧೀಶ್ ಜೈನ್(33) ಎಂದು ಗುರುತಿಸಲಾಗಿದೆ. ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ಸುಧೀಶ್ ಜೈನ್ ನಿನ್ನೆ ಸಂಜೆ ಇಂದ ನಾಪತ್ತೆ ಯಾಗಿದ್ದ ಎಂದು ಹೇಳಲಾಗಿದೆ. ಸ್ಥಳಕ್ಕೆ ಬೆಳ್ತಂಗಡಿ ಪೊಲೀಸರು ಭೇಡಿ ನೀಡಿ ಪರಿಶೀಲನೆ ನಡೆಸಿದ್ದಾರೆ.

    ಒಂದು ಕಾಲದಲ್ಲಿ ಊರಿನ ಐವತ್ತು ಎಕರೆ ಪ್ರದೇಶದ ಗದ್ದೆಯಲ್ಲಿ ಮೂರು ಬೆಳೆ ಮಾಡಲು ಉಪಯೋಗವಾಗುತ್ತಿದ್ದ ಕೆರೆ ಇದಾಗಿತ್ತು . 7 ಎಕರೆ ವಿಸ್ತಾರ ಪ್ರದೇಶದಲ್ಲಿ ಹರಡಿ ಕೊಂಡಿರುವ ಈ ಕೆರೆ ಮಳೆಗಾಲದಲ್ಲಿ ನೀರು ತುಂಬಿ ಸಮುದ್ರದಂತೆ ಕಂಡುಬರುತ್ತದೆ. ಕೃಷಿಗೆ ನೀರೊದಗಿಸುತ್ತಿರುವ ಈ ಸುಂದರ ಕೆರೆ ಈಗ ಸುಸೈಡ್ ಪಾಯಿಂಟ್ ಆಗಿ ಪರಿವರ್ತನೆ ಆಗುತ್ತಿರುವ ಬಗ್ಗೆ ಸ್ಥಳೀಯರು ಕಳವಳ ವ್ಯಕ್ತ ಪಡಿಸಿದ್ದಾರೆ

    Share Information
    Advertisement
    Click to comment

    You must be logged in to post a comment Login

    Leave a Reply