LATEST NEWS
ತಲಾಖ್ ನೀಡದ ಪತ್ನಿಗೆ ಹಿಂಸೆ, ತ್ರಿವಳಿ ತಲಾಖ್ ವಿರುದ್ಧ ಸಿಡಿದೆದ್ದ ಉಡುಪಿ ಮಹಿಳೆ
ತಲಾಖ್ ನೀಡದ ಪತ್ನಿಗೆ ಹಿಂಸೆ, ತ್ರಿವಳಿ ತಲಾಖ್ ವಿರುದ್ಧ ಸಿಡಿದೆದ್ದ ಉಡುಪಿ ಮಹಿಳೆ
ಉಡುಪಿ, ಜೂನ್ 20: ತಲಾಖ್ ನೀಡಲು ನಿರಾಕರಿಸಿದ ಪತ್ನಿಗೆ ಪತಿರಾಯನೊಬ್ಬ ಹಿಗ್ಗಾಮುಗ್ಗಾ ಥಳಿಸಿದ ಘಟನೆ ಉಡುಪಿ ಜಿಲ್ಲೆಯ ಕುಂದಾಪುರದ ಕೋಡಿಯಲ್ಲಿ ನಡೆದಿದೆ.
11 ವರ್ಷಗಳ ವರ್ಷಗಳ ಹಿಂದೆ ಮದುವೆಯಾಗಿದ್ದ ಸೈಯ್ಯದ್ ಮೂರನೇ ಮದುವೆಯಾಗಲು ಯೋಚಿಸಿದ್ದ. ಈ ಕಾರಣದಿಂದಾಗಿ ಸೈಯ್ಯದ್ ತನ್ನ ಎರಡನೇ ಪತ್ನಿಗೆ ತಲಾಖ್ ನೀಡುವಂತೆ ಪೀಡಿಸುತ್ತಿದ್ದ. ಅಲ್ಲದೆ ರಾಡ್ ನಿಂದ ಹಲ್ಲೆ ನಡೆಸಿ ಕೊಲೆ ಬೆದರಿಕೆಯನ್ನೂ ಹಾಕಿದ್ದ. ಕಳೆದ ನಾಲ್ಕೈದು ದಿನಗಳಿಂದ ಸಯ್ಯದ್ ವಿಪರೀತ ಹಿಂಸೆ ಕೊಡುತ್ತಿದ್ದ ಕಾರಣ ಇದೀಗ ಪತ್ನಿ ಆತನ ವಿರುದ್ಧ ಪೋಲೀಸ್ ದೂರು ನೀಡಿದ್ದಾರೆ.
ಈಗಾಗಲೇ ಎರಡು ಮದುವೆಯಾಗಿರುವ ಸೈಯ್ಯದ್ ಗೆ ಇಬ್ಬರು ಪುತ್ರಿಯರಿದ್ದು, ಇದೀಗ ಮತ್ತೆ ತನ್ನ ಮದುವೆಯ ಚಪಲ ತೀರಿಸುದಕ್ಕೋಸ್ಕರ ಹೊರಟಿದ್ದು, ಈ ಬಾರಿ ಪೋಲೀಸ್ ಅತಿಥಿಯಾಗುವ ಸಾಧ್ಯತೆಯಿದೆ.
ಕುಂದಾಪುರ ಪೋಲೀಸರು ದೂರಿನ ಕುರಿತು ತನಿಖೆ ನಡೆಸುತ್ತಿದ್ದು, ಹಲ್ಲೆಗೊಳಗಾದ ಮಹಿಳೆಗೆ ಸಾಂತ್ವಾನ ಕೇಂದ್ರದಲ್ಲಿ ಆಶ್ರಯ ನೀಡಲಾಗಿದೆ.
You must be logged in to post a comment Login