DAKSHINA KANNADA
ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣ ಸುಳ್ಯದ ವ್ಯಕ್ತಿಯೊಬ್ಬನ ಬಂಧನ
ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣ ಸುಳ್ಯದ ವ್ಯಕ್ತಿಯೊಬ್ಬನ ಬಂಧನ
ಮಂಗಳೂರು ಜುಲೈ 20: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಸಂಬಂಧ ತನಿಖೆ ನಡೆಸುತ್ತಿರುವ ಎಸ್ ಐಟಿ ಪೊಲೀಸರು ಮತ್ತೊಬ್ಬ ಆರೋಪಿಯನ್ನು ಬಂಧಿಸಿದ್ದಾರೆ. ದಕ್ಷಿಣ ಕನ್ನಡದ ಸುಳ್ಯ ತಾಲೂಕಿನ ವ್ಯಕ್ತಿಯೊಬ್ಬನನ್ನು ಎಸ್ ಐ ಟಿ ತಂಡ ಬಂಧಿಸಿದೆ ಎಂದು ಮೂಲಗಳು ತಿಳಿಸಿವೆ.
ಬಂಧಿತನನ್ನು ದಕ್ಷಿಣ ಕನ್ನಡ ಜಿಲ್ಲೆಯ ಸಳ್ಯ ತಾಲೂಕಿನ ಸಂಪಾಜೆ ಗ್ರಾಮದ ಮೋಹನ್ ನಾಯಕ್ ಎಂದು ಹೇಳಲಾಗಿದೆ. ಈತನನ್ನು ಎಸ್ ಐ ಟಿ ಬುಧವಾರದಂದು ವಶಕ್ಕೆ ಪಡೆದಿದ್ದಾರೆ ಎಂದು ಹೇಳಲಾಗಿದೆ.
ಗೌರಿ ಲಂಕೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಬಂಧಿಸಲಾಗಿರುವ ಆರೋಪಿಗಳಾದ ಅಮೋಲ್ ಕಾಳೆ, ಹಾಗೂ ವಾಗ್ಮೋರೆ ಅವರಿಗೆ ಸುಕಂದಕಟ್ಟೆಯಲ್ಲಿ ಮೋಹನ್ ನಾಯಕ್ ಗೆ ಮನೆ ಕೊಡಿಸಿದ್ದಾರೆ ಎಂದು ಆರೋಪಿಸಲಾಗಿದೆ. ಈ ಹಿನ್ನೆಲೆಯಲ್ಲಿ ಎಸ್ ಐ ಟಿ ಪೊಲೀಸರ ತಂಡ ಮೋಹನ್ ನಾಯಕ್ ಅವರನ್ನು ಬಂಧಿಸಿದ್ದಾರೆ ಎಂದು ಹೇಳಲಾಗಿದೆ.
ಬಂಧಿತ ಆರೋಪಿ ಮೋಹನ್ ನಾಯಕ್ ಸಂಪಾಜೆಯಲ್ಲಿ ಅಕ್ಯುಪಂಚರ್ ನ ಚಿಕಿತ್ಸೆಗೆ ಬಳಸಲಾಗುವ ಸಾಧನ ಗಳು ಸೇರಿದಂತೆ ನಾಟಿ ಔಷಧ ವನ್ನು ಮಾರಾಟಮಾಡುತ್ತಿದ್ದ ಎಂದು ಹೇಳಲಾಗಿದೆ. ಅದಲ್ಲದೇ ಸನಾಥನ ಸಂಸ್ಥೆಯೊಂದಿಗೆ ಸಂಪರ್ಕ ಹೊಂದಿದ್ದಾರೆ ಎಂದು ಆರೋಪಿಸಲಾಗಿದೆ. ಧರ್ಮ ಜಾಗೃತಿ ಸಮಾವೇಶದಲ್ಲಿ ಈತ ಭಾಗಿಯಾಗಿದ್ದ ಎಂದು ಹೇಳಲಾಗಿದೆ.
You must be logged in to post a comment Login