Connect with us

    DAKSHINA KANNADA

    ದಕ್ಷಿಣಕನ್ನಡ ಜಿಲ್ಲೆಯಾದ್ಯಂತ ಅಂಫಾನ್ ಚಂಡಮಾರುತದ ಅಬ್ಬರ, ಹಲವೆಡೆ ಭಾರೀ ಅನಾಹುತ

    ದಕ್ಷಿಣಕನ್ನಡ ಜಿಲ್ಲೆಯಾದ್ಯಂತ ಅಂಫಾನ್ ಚಂಡಮಾರುತದ ಅಬ್ಬರ, ಹಲವೆಡೆ ಭಾರೀ ಅನಾಹುತ

    ಪುತ್ತೂರು ಮೇ.05: ದಕ್ಷಿಣಕನ್ನಡ ಜಿಲ್ಲೆಯಲ್ಲಿ ಚಂಡಮಾರುತ ಅಂಫಾನ್ ಬಾರಿ ಅನಾಹುತ ಸೃಷ್ಠಿಸಿದೆ. ಇಂದು ಸಂಜೆಯಿಂದ ಜಿಲ್ಲೆಯ ಹಲವೆಡೆ ಬೀಸಿದ ಭಾರೀ ಮಳೆ ಗಾಳಿಯಿಂದ ಅಪಾರ ಹಾನಿ ಸಂಭವಿಸಿದೆ.

    ಜಿಲ್ಲೆಯ ಪುತ್ತೂರು, ಸುಳ್ಯ, ಬೆಳ್ತಂಗಡಿ ಭಾಗದಲ್ಲಿ ಹೆಚ್ಚಿನ ಹಾನಿ ಸಂಭವಿಸಿದ್ದು, ಭಾರೀ ಗಾಳಿಗೆ ಮರ, ವಿದ್ಯುತ್ ಕಂಬ, ಮನೆಗಳ ಮೇಲ್ಛಾವಣಿ ಸೇರಿದಂತೆ ಎಲ್ಲವೂ ಹಾರಿ ಹೋಗಿವೆ. ಪುತ್ತೂರಿನ ಬೆದ್ರಾಳ ಎಂಬಲ್ಲಿ ಚಲಿಸುತ್ತಿದ್ದ ಮಿನಿ ಲಾರಿ ಮೇಲೆ ಮರವೊಂದು ಬಿದ್ದ ಪರಿಣಾಮ ಲಾರಿಯಲ್ಲಿದ್ದ ವ್ಯಕ್ತಿಗೆ ಗಂಭೀರ ಸ್ವರೂಪದ ಗಾಯಗಳಾಗಿವೆ.

    ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದ ಮೇಲ್ಛಾವಣಿಗೆ ಹಾಕಲಾದ ಹೆಂಚು ಕೂಡಾ ಹಾರಿ ಹೋಗಿವೆ. ಸವಣೂರು, ಕಡಬ ಹಾಗೂ ಸುಬ್ರಹ್ಮಣ್ಯ ಭಾಗದಲ್ಲಿ ಅಡಿಕೆ ತೋಟದಲ್ಲಿ ನೂರಕ್ಕೂ ಮಿಕ್ಲಿದ ಅಡಿಕೆ ಮರಗಳು ನೆರಕ್ಕುರುಳಿವೆ.

    Share Information
    Advertisement
    Click to comment

    You must be logged in to post a comment Login

    Leave a Reply