LATEST NEWS
ಅಮಿತ್ ಷಾ ಮಂಗಳೂರು ಕಾರ್ಯಕ್ರಮ ರದ್ದು
ಅಮಿತ್ ಷಾ ಮಂಗಳೂರು ಕಾರ್ಯಕ್ರಮ ರದ್ದು
ಮಂಗಳೂರು ಅಕ್ಟೋಬರ್ 3: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ನಾಳೆ ಮಂಗಳೂರು ಸಭೆ ರದ್ದಾಗಿದೆ. ದೆಹಲಿಯಿಂದ ದಿಡೀರ್ ಬುಲಾವ್ ಬಂದಿರುವ ಹಿನ್ನೆಲೆಯಲ್ಲಿ ಇಂದು ನವದೆಹಲಿಗೆ ಅಮಿತ್ ಷಾ ವಾಪಾಸಾಗಲಿದ್ದಾರೆ.
ದೆಹಲಿಯಲ್ಲಿ ಧೀಡಿರ್ ವಿಶೇಷ ಸಭೆ ಕರೆದಿರುವ ಷಾ ಕೇರಳ ದಿಂದ ಇಂದು ಮಂಗಳೂರಿಗೆ ಹಿಂದಿರುಗಲಿದ್ದಾರೆ. ಇಂದು ಸಂಜೆ ಮಂಗಳೂರಿಗೆ ಆಗಮಿಸಲಿರುವ ಅಮಿತ್ ಷಾ ವಿಶೇಷ ವಿಮಾನದ ಮೂಲಕ ದೆಹಲಿಗೆ ತೆರಳಲಿದ್ದಾರೆ. ಈ ಹಿನ್ನೆಯಲ್ಲಿ ನಾಳೆ ಮಂಗಳೂರಿನಲ್ಲಿ ಆಯೋಜಿಸಲಾಗಿದ್ದ ಷಾ ಅವರ ಕಾರ್ಯಕ್ರಮ ರದ್ದುಪಡಿಸಲಾಗಿದೆ.
You must be logged in to post a comment Login