Connect with us

    LATEST NEWS

    ಮಳೆ ಇಲ್ಲದ ದಿನಗಳಲ್ಲಿ ಆಗುಂಬೆ ಘಾಟ್ ನಲ್ಲಿ ಘನ ವಾಹನ ಸಂಚಾರಕ್ಕೆ ಅವಕಾಶ

    ಉಡುಪಿ, ನವೆಂಬರ್ 14 : ಮಳೆಗಾಲದ  ಭಾರಿ ಮಳೆ ಹಿನ್ನಲೆ ಆಗುಂಬೆ ಘಾಟ್ ನಲ್ಲಿ ಘನ ವಾಹನ ಸಂಚಾರಕ್ಕೆ ಹೇರಿದ್ದ ನಿಷೇಧವನ್ನು ಹಿಂಪಡೆಯಲಾಗಿದ್ದು, ಸತತ ಮಳೆಯಾಗುವ ದಿನಗಳನ್ನು ಬಿಟ್ಟು  ಉಳಿದ ದಿನಗಳಲ್ಲಿ ಆಗುಂಭೆ ಘಾಟ್ ಪ್ರದೇಶದಲ್ಲಿ ಘನ ವಾಹನ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ.

    ಈ ಕುರಿತಂತೆ ಆದೇಶ ಹೊರಡಿಸಿರುವ ಉಡುಪಿ ಜಿಲ್ಲಾಧಿಕಾರಿ ಮಳೆ ಇಲ್ಲದ ದಿನಗಳಲ್ಲಿ 12 ಟನ್ ಗಿಂತ ಅಧಿಕ ಭಾರದ ವಾಹನಗಳು ಆಗುಂಬೆ ಘಾಟ್ ಪ್ರದೇಶದಲ್ಲಿ ಸಂಚರಿಸಬಹುದಾಗಿದ್ದು, ಸತತ ಮಳೆ ಇರುವ ಸಂದರ್ಭದಲ್ಲಿ ರಾಷ್ಟ್ರೀಯ ಹೆದ್ದಾರಿ 169 ಎ ರ ತೀರ್ಥಹಳ್ಳಿ-ಉಡುಪಿ-ಮಂಗಳೂರು ರಸ್ತೆಯ ಆಗುಂಬೆ ಘಾಟಿಯ ಮಾರ್ಗದಲ್ಲಿ ಸಾರ್ವಜನಿಕರ ಸುಗಮ ಸಂಚಾರದ ಹಿತದೃಷ್ಟಿಯಿಂದ ಭಾರಿ ಹಾಗೂ ಸತತ ಮಳೆಯಾಗುವ ದಿನಗಳಂದು 12 ಟನ್‌ಗಿಂತ ಅಧಿಕ ಭಾರದ ವಾಹನಗಳ ಸಂಚಾರವನ್ನು ನಿಷೇಧಿಸಲಾಗಿದೆ. ಈ ಸಂದರ್ಭ  ಪರ್ಯಾಯ ಮಾರ್ಗವಾದ ಉಡುಪಿ-ಬ್ರಹ್ಮಾವರ-ಬಾರ್ಕೂರು-ಶಂಕರನಾರಾಯಣ-ಸಿದ್ಧಾಪುರ-ಹೊಸಗಂಡಿ-ಹುಲಿಕಲ್ ಘಾಟಿ-ಹೊಸನಗರ-ತೀರ್ಥಹಳ್ಳಿ ಹಾಗೂ ಉಡುಪಿ-ಕಾರ್ಕಳ-ಬಜಗೋಳಿ-ಎಸ್.ಕೆ ಬಾರ್ಡರ್-ಕೆರೆಕಟ್ಟೆ-ಶೃಂಗೇರಿ-ಶಿವಮೊಗ್ಗ ಮೂಲಕ ಸಂಚರಿಸುವಂತೆ ಆದೇಶದಲ್ಲಿ ತಿಳಿಸಲಾಗಿದೆ.  ಹಾಗೂ ಭಾರಿ ಮಳೆ ಇಲ್ಲದಿರುವ ದಿನಗಳಲ್ಲಿ ಎಲ್ಲಾ ವಾಹನಗಳ ಮುಕ್ತ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ ಎಂದು ಜಿಲ್ಲಾಧಿಕಾರಿ ಜಿ. ಜಗದೀಶ್ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

    Share Information
    Advertisement
    Click to comment

    You must be logged in to post a comment Login

    Leave a Reply