LATEST NEWS
ಬಿಜೆಪಿಯ ಗುಜರಾತ್ ಗೆಲುವನ್ನು ಪ್ರಶ್ನೆ ಮಾಡಿದ ಪ್ರಕಾಶ್ ರೈ
ಬಿಜೆಪಿಯ ಗುಜರಾತ್ ಗೆಲುವನ್ನು ಪ್ರಶ್ನೆ ಮಾಡಿದ ಪ್ರಕಾಶ್ ರೈ
ಬೆಂಗಳೂರು ಡಿಸೆಂಬರ್ 18: ಬಿಜೆಪಿಯ ಗುಜರಾತ್ ವಿಜಯೋತ್ಸವವನ್ನು ಖ್ಯಾತ ನಟ ಪ್ರಕಾಶ್ ರೈ ಪ್ರಶ್ನಿಸಿದ್ದಾರೆ. ಈ ಬಗ್ಗೆ ಟ್ವೀಟರ್ ನಲ್ಲಿ ತಮ್ಮ ಅನಿಸಿಕೆಯನ್ನು ಟ್ವಿಟ್ ಮಾಡಿರುವ ಪ್ರಕಾಶ್ ರೈ “ಮಾನ್ಯ ಪ್ರಧಾನ ಮಂತ್ರಿಗಳೇ, ಗೆಲುವಿಗೆ ಧನ್ಯವಾದಗಳು. ಆದರೆ ನೀವು ನಿಜವಾಗಿಯೂ ಸಂತೋಷದಿಂದಿದ್ದೀರಾ?” ಎಂದು ಪ್ರಶ್ನಿಸಿದ್ದಾರೆ.
ಇಂದು ನಡೆದ ಗುಜರಾತ್ ಹಾಗೂ ಹಿಮಾಚಲ ಪ್ರದೇಶದ ವಿಧಾನಸಭೆ ಚುನಾವಣಾ ಫಲಿತಾಂಶದಲ್ಲಿ ಬಿಜೆಪಿ ಗೆದ್ದು ಅಧಿಕಾರ ಪಡೆಯುವತ್ತ ಸಾಗಿದೆ. ಈ ಹಿನ್ನಲೆಯಲ್ಲಿ ಟ್ವಿಟ್ ಮಾಡಿದ ಪ್ರಕಾಶ್ ರೈ ಪ್ರಧಾನಿ ಮಂತ್ರಿಗಳಿಗೆ ಈ ಪ್ರಶ್ನೆ ಹಾಕಿದ್ದಾರೆ.
ಪ್ರಕಾಶ್ ರೈ ಅವರ ಟ್ವಿಟ್ ನ ವಿವರ
ಮಾನ್ಯ ಪ್ರಧಾನ ಮಂತ್ರಿಗಳೇ ಎಂದು ಪತ್ರದ ಶೈಲಿಯಲ್ಲಿ ಪ್ರಾರಂಭವಾಗುವ ಟ್ವೀಟ್ ನಲ್ಲಿ ಪ್ರಕಾಶ್ ರೈ, ಪ್ರಧಾನಿಗೆ ಅಭಿನಂದನೆ ತಿಳಿಸುತ್ತಾರೆ. “ನಿಮ್ಮ ಅಭಿವೃದ್ದಿ ಕಾರ್ಯತಂತ್ರದಿಂದಾಗಿ ನೀವು ಭಾರೀ ಬಹುಮತಗಳಿಂದ ಗೆಲ್ಲಬೇಕಾಗಿತ್ತು. 150 ಕ್ಷೇತ್ರಗಳಲ್ಲಿ ಗೆಲ್ಲುವ ನಿಮ್ಮ ಗುರಿ ಏನಾಯಿತು? ನಿಮ್ಮ ತಂತ್ರ ಫಲಿಸಲಿಲ್ಲ. ಧರ್ಮ, ಜಾತಿ, ಪಾಕಿಸ್ತಾನ, ವೈಯುಕ್ತಿಕ ಲಾಭಗಳಿಕೆ ಈ ಎಲ್ಲಕ್ಕಿಂತ ದೊಡ್ಡ ಸಮಸ್ಯೆಗಳು ನಮ್ಮ ನಡುವೆ ಇದೆ. ಗ್ರಾಮೀಣ ಪ್ರದೇಶದ ರೈತರ ದನಿಯನ್ನು ದಮನ ಮಾಡಲಾಗಿದೆ, ಅಥವಾ ನಿರ್ಲಕ್ಷಿಸಲಾಗಿದೆ. ಆದರೆ ಇದೀಗ ಗ್ರಾಮ ಭಾರತದ ಸಮಸ್ಯೆಗಳ ದನಿ ಏರಿದೆ. ಆ ದನಿ ನಿಮಗೆ ಕೇಳುತ್ತಿದೆಯೆ?” ಪ್ರಕಾಶ್ ರೈ ಟ್ವಿಟ್ಟರ್ ನಲ್ಲಿ ಪ್ರಶ್ನಿಸಿದ್ದಾರೆ.
You must be logged in to post a comment Login