Connect with us

    FILM

    ‘ಜೊತೆ ಜೊತೆಯಲಿ’ ಧಾರವಾಹಿಯಿಂದ ಹೊರ ನಡೆದ ನಟ ಅನಿರುದ್ಧ್

    ಬೆಂಗಳೂರು, ಆಗಸ್ಟ್ 19: ‘ಜೊತೆ ಜೊತೆಯಲಿ’ ಧಾರವಾಹಿಯಿಂದ ನಟ ಅನಿರುದ್ಧ್ ಹೊರ ನಡೆದಿದ್ದಾರೆ ಎನ್ನಲಾಗಿದೆ. ತುಂಬಾ ದಿವಸದಿಂದ ಅನಿರುದ್ಧ್ ಧಾರವಾಹಿ ತಂಡದ ಜೊತೆಗೆ ಕಿರಿಕ್‌ ಮಾಡಿಕೊಳ್ಳುತ್ತಿದ್ದರು ಎನ್ನಲಾಗಿದೆ. ಈ ಹಿಂದೆ ಅವರು ಎರಡು ಬಾರಿ ಕೂಡ ಧಾರವಾಹಿಯಿಂದ ಹೊರೆ ನಡೆದಿದ್ದರು ಆದರೆ ಅನೇಕರ ಸಂಧಾನದ ಫಲವಾಗಿ ಅವರು ಮತ್ತೆ ಅದೇ ಧಾರವಾಹಿಯಲ್ಲಿ ನಟನೆ ಶುರು ಮಾಡಿದ್ದರು.

    ಆಗಸ್ಟ್ 18 ರಂದು ಧಾರಾವಾಹಿ ಚಿತ್ರೀಕರಣ ಮಾಡುವಾಗ ಅನಿರುದ್ಧ್ ಒಂದು ಸೀನ್ ಬಗ್ಗೆ ವಿರೋಧ ವ್ಯಕ್ತಪಡಿಸಿದ್ದರು, ಚಿತ್ರೀಕರಣದವರು ಮನವೊಲಿಸಲು ಮುಂದಾದರು ಸಹ ಅವರು ಅದಕ್ಕೆ ಒಪ್ಪದೇ ಮನೆಗೆ ತೆರಳಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ.

    ಈ ನಡುವೆ ಕನ್ನಡ ಕಿರುತೆರೆಯಿಂದಲೇ ಅವರನ್ನು ಬ್ಯಾನ್‌ ಮಾಡಲು ಕೂಡ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದ್ದು, ಸಿನಿಮಾರಂಗದಲ್ಲಿ ಅವರು ಭಾರಿ ಹಿನ್ನಡೆ ಅನುಭವವಿಸಿದ ಬಳಿಕ ಕಿರುತೆರೆಯಲ್ಲಿ ಭಾರಿ ಜನಪ್ರಿಯತೆಯನ್ನು ಗಳಿಸಿದ್ದರು, ಆದರೆ ಅವರ ವರ್ತನೆಗಳೇ ಅವರಿಗೆ ಮುಳುವಾಗುತ್ತಿದ್ದು, ಅವರ ಮುಂದಿನ ಸಿನಿ ಪ್ರಯಾಣದ ಮೇಲೆ ಮೋಡ ಕವಿಯಲಿದೆ ಎನ್ನಲಾಗುತ್ತಿದೆ.

    ಇನ್ನೂ ತಮ್ಮ ವಿರುದ್ದ ಕೇಳಿ ಬಂದಿರುವ ಆರೋಪದ ಬಗ್ಗೆ ನಟ ಅನಿರುದ್ದ್‌ ಅವರು ಯಾವರೀತಿಯಲ್ಲಿ ತಮ್ಮ ಸಮರ್ಥನೆಯನ್ನು ಹೇಳಲಿದ್ದಾರೆ ಎನ್ನುವುದನ್ನು ಕಾದು ನೋಡಬೇಕಾಗಿದೆ. ಮುಂದೇನಾಗುತ್ತದೆ ಅನ್ನೋದನ್ನು ಕಾದು ನೋಡಬೇಕಿದೆ.

    Share Information
    Advertisement
    Click to comment

    You must be logged in to post a comment Login

    Leave a Reply