Connect with us

    KARNATAKA

    ಹಾಡಹಗಲೇ ಯುವತಿಯ ಮೇಲೆ ಆಸಿಡ್‌ ದಾಳಿ ಮಾಡಿದ ಸೈಕೋ ಪ್ರೇಮಿ !

    ಬೆಂಗಳೂರು, ಎಪ್ರಿಲ್ 28: ಪ್ರೀತಿ ನಿರಾಕರಿಸಿದ ಕಾರಣಕ್ಕೆ ಯುವತಿಯ ಮೇಲೆ ಪಾಗಲ್ ಪ್ರೇಮಿಯೊಬ್ಬ ಆಸಿಡ್ ದಾಳಿ ಮಾಡಿರುವ ಭಯಾನಕ ಘಟನೆ ಬೆಂಗಳೂರಿನ ಸುಂಕದಕಟ್ಟೆಯ ಬಳಿ ನಡೆದಿದೆ.

    ಸುಂಕದಕಟ್ಟೆಯ ಮುತ್ತೂಟ್ ಫಿನ್ ಕಾರ್ಪ್ ಬಳಿ ಈ ದುಷ್ಕೃತ್ಯ ನಡೆದಿದ್ದು, 23 ವರ್ಷದ ಯುವತಿ ಮೇಲೆ ಸೈಕೋ ಪ್ರೇಮಿ ನಾಗೇಶ್ ಎಂಬಾತ ಆ್ಯಸಿಡ್ ದಾಳಿ ಮಾಡುವ ಮೂಲಕ ವಿಕೃತಿ ಮೆರೆದಿದ್ದಾನೆ. ಬೆಳಗ್ಗೆ ಎಂಟೂವರೆಯ ಸುಮಾರಿಗೆ ಯುವತಿ ತನ್ನ ತಂದೆಯ ಬೈಕ್‌ನಲ್ಲಿ ಕೆಲಸ ಮಾಡುವ ಕಚೇರಿಗೆ ಬಂದಿದ್ದಾಳೆ. ಮಗಳನ್ನು ಕಚೇರಿಗೆ ಡ್ರಾಪ್ ಮಾಡಿ ತಂದೆ ಅಲ್ಲಿಂದ ಹೊರಟ ಕೆಲವೇ ಕ್ಷಣಗಳಲ್ಲಿ ಯುವತಿ ಇದ್ದ ಜಾಗಕ್ಕೆ ಬಂದ ಕಿರಾತಕ ಆಕೆಯ ಮೇಲೆ ಆಸಿಡ್ ದಾಳಿ ಮಾಡಿದ್ದಾನೆ.

    ಕಳೆದ ಕೆಲ ಸಮಯಗಳಿಂದ ಯುವತಿಯ ಬೆನ್ನುಬಿದ್ದಿದ್ದ ವಿಕೃತ ಪ್ರೇಮಿ ನಾಗೇಶ್, ತನ್ನನ್ನು ಪ್ರೀತಿಸುವಂತೆ ಪೀಡಿಸುತ್ತಿದ್ದ. ಆದರೆ ಆಕೆ ತಿರಸ್ಕರಿಸಿದ್ದಳು. ನೀನು ನನ್ನ ಅಣ್ಣನಂತೆ, ನಿನ್ನನ್ನು ಪ್ರೀತಿ ಮಾಡಲು ಸಾಧ್ಯವಿಲ್ಲ ಎಂದು ಅನೇಕ ಸಲ ಹೇಳಿದ್ದಳು. ಅದಾಗ್ಯೂ ಆತ ಈಕೆಯ ಬೆನ್ನು ಬಿದ್ದಿದ್ದು, ಪ್ರೀತಿಸಲೇಬೇಕೆಂದು ಬೆದರಿಕೆ ಹಾಕಿದ್ದ.

    ಆದರೆ ಆಕೆ ಸಾಧ್ಯವೇ ಇಲ್ಲ ಎಂದು ಖಡಾಖಂಡಿತವಾಗಿ ಹೇಳಿದ್ದಕ್ಕೆ ಇಂದು ಬೆಳಗ್ಗೆ ಕಚೇರಿ ಬಳಿ ತೆರಳಿ ಆಸಿಡ್‌ ದಾಳಿ ಮಾಡಿದ್ದಾನೆ. ಕಳೆದ ವರ್ಷವಷ್ಟೇ ಎಂಕಾ ಮುಗಿಸಿ ಉದ್ಯೋಗದಲ್ಲಿದ್ದ ಯುವತಿ ಏಳೆಂಟು ತಿಂಗಳ ಹಿಂದಷ್ಟೇ ಮುತ್ತೂಟ್‌ ಫಿನ್ ಕಾರ್ಪ್‌ಗೆ ಉದ್ಯೋಗಕ್ಕೆ ಸೇರಿದ್ದಳು.

    ಮನೆಯವರ ಮುದ್ದಿನ ಮಗಳಾಗಿ ಪ್ರೀತಿ ಗಳಿಸಿದ್ದ ಯುವತಿಯನ್ನು ತಂದೆ ತಾಯಿ ಕೂಲಿ ಕೆಲಸ ಮಾಡಿ ಓದಿಸಿದ್ದರು. ಮುಂದಿನ ತಿಂಗಳು ಆಕೆಯ ಅಕ್ಕನ ಮದುವೆಗೆ ದಿನ ನಿಗದಿಯಾಗಿತ್ತು. ಇದೇ ಸಮಯದಲ್ಲಿ ಈಕೆಯ ಮದುವೆಗೂ ಮಾತುಕತೆ ನಡೆದಿತ್ತು. ಆದರೆ ಇದೀಗ ವಿಕೃತ ಪ್ರೇಮಿಯ ಸೇಡಿಗೆ ಆಕೆ ಜೀವನ ಪರ್ಯಂತ ನರಳುವಂತಾಗಿದೆ.

    Share Information
    Advertisement
    Click to comment

    You must be logged in to post a comment Login

    Leave a Reply