DAKSHINA KANNADA
ಗುರುಪುರದಲ್ಲಿ ಆಕಸ್ಮಿಕ ಬೆಂಕಿ- ಹಲವು ಮರ ಸುಟ್ಟು ಕರಕಲು
ಮಂಗಳೂರು, ಮೇ 09: ನಗರದ ಹೊರವಲಯದ ಗುರುಪುರದ ದೋಣಿಂಜೆ ಪ್ರದೇಶದ ಹಡೀಲು ಜಮೀನಿನಲ್ಲಿ ಭಾರೀ ಪ್ರಮಾಣದಲ್ಲಿ ಬೆಂಕಿ ಕಾಣಿಸಿಕೊಂಡು, ಒಣಹುಲ್ಲಿನ ಸಹಿತ ಹಲವು ತಾಳೆ, ಈಚಲು, ಮಾವು ಹಾಗೂ ಹಲಸಿನ ಮರಗಳು ಸುಟ್ಟು ಕರಕಲಾಗಿವೆ.
ಈ ಬೆಂಕಿಯು ಕುಕ್ಕುದಕಟ್ಟೆ ಭಾಗದತ್ತ ವ್ಯಾಪಿಸಿತು. ಈ ಪ್ರದೇಶದಲ್ಲಿ ಗೇಲ್ ಕಂಪೆನಿಯವರು ಅಳವಡಿಸಿದ್ದ ಗ್ಯಾಸ್ ಪೈಪ್ಲೈನ್ ಸಂಪರ್ಕದ ಸೆನ್ಸಾರ್ಗೆ ಹಾನಿಯುಂಟು ಮಾಡಿದೆ. ಮಾಹಿತಿ ತಿಳಿದ ಕಂಪೆನಿಯವರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದಾರೆ.
ಅಗ್ನಿಶಾಮಕ ದಳದವರು ಕಂಪೆನಿಯ ಉಪಕರಣಗಳಿಗೆ ಹಾನಿಯಾಗದಂತೆ ಬೆಂಕಿ ನಂದಿಸಿದರೂ, ಮತ್ತೊಂದು ಕಡೆಯಲ್ಲಿ ವ್ಯಾಪಕವಾಗಿ ಹರಡಿಕೊಂಡಿತ್ತು. ಬೆಂಕಿ ಆಕಸ್ಮಿಕಕ್ಕೆ ಕಾರಣ ತಿಳಿದು ಬಂದಿಲ್ಲ.
You must be logged in to post a comment Login