Connect with us

    LATEST NEWS

    ಕುಡಿತದ ಅಮಲಿನಲ್ಲಿ ಕಾರು ಚಲಾಯಿಸಿ ಅಮಾಯನಕ ಸಾವಿಗೆ ಕಾರಣನಾದ ಪಿಡಬ್ಲ್ಯೂಡಿ ಎಇಇ – ಸಿಸಿಟಿವಿ ವಿಡಿಯೋ

    ಮಂಗಳೂರು ಮಾರ್ಚ್ 29: ಕುಡಿತದ ಅಮಲಿನಲ್ಲಿ ಕಾರು ಚಲಾಯಿಸಿ ರಸ್ತೆಯಲ್ಲಿ ನಡೆದುಕೊಂಡು ಹೊಗುತ್ತಿದ್ದ ಬಿಎಸ್ ಎನ್ ಎಲ್ ನ ನಿವೃತ್ತ ಉದ್ಯೋಗಿಯೊಬ್ಬರನ್ನು ಬಲಿ ತೆಗೆದುಕೊಂಡ ಘಟನೆ ಮಂಗಳೂರು ನಗರದ ಸರ್ಕಿಟ್ ಹೌಸ್ ಬಳಿ ನಡೆದಿದೆ.


    ಮೃತ ವ್ಯಕ್ತಿಯನ್ನು ಬಿಎಸ್ ಎನ್ ಎಲ್ ನ ನಿವೃತ್ತ ಉದ್ಯೋಗಿ ಎ. ಆನಂದ ಎಂದು ಗುರುತ್ತಿಸಲಾಗಿದೆ. ಕಾರ್ಯ ನಿಮಿತ್ತ ಉಡುಪಿಗೆ ಹೋಗಿದ್ದ ಆನಂದ ಅವರು ಕೆಲಸ ಮುಗಿಸಿ ಬಂದು ಸರ್ಕಿಟ್ ಹೌಸ್ ಬಳಿ ರಸ್ತೆಯ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಈ ಘಟನೆ ನಡೆದಿದೆಯ. ಕಾರು ಚಾಲಕ ಸಣ್ಣ ನೀರಾವರಿ ಇಲಾಖೆಯ ಎಂಜಿನಿಯರ್ ಶಣ್ಮುಗಂ ಎಂದು ಗುರುತಿಸಲಾಗಿದ್ದು, ಇವರು ಕುಡಿತದ ಅಮಲಿನಲ್ಲಿ ಕಾರನ್ನು ಅತೀ ವೇಗವಾಗಿ ಚಲಾಯಿಸಿದಲ್ಲದೇ, ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಆನಂದ ಅವರ ಮೇಲೆ ಕಾರು ಹರಿಸಿದ್ದಾರೆ. ಈ ಅಪಘಾತದ ತೀವೃತೆಗೆ ಆನಂದ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

    ಆನಂದ ಅವರನ್ನು ಬಲಿ ತೆಗೆದುಕೊಂಡಿದ್ದು ಈ ಭೀಕರ ದೃಶ್ಯ ಸಿಸಿ ಟಿವಿಯಲ್ಲಿ ದಾಖಲಾಗಿದೆ. ಮಂಗಳೂರು ಪೂರ್ವ ಸಂಚಾರಿ ಪೊಲೀಸರು ಷಣ್ಮುಂಗಂ ಮೇಲೆ ಕೊಲೆ ಆರೋಪದ ಪ್ರಕರಣವನ್ನು ದಾಖಲಿಸಿದ್ದಾರೆ ಎಂದು ತಿಳಿದು ಬಂದಿದೆ.

    ಮೃತ ಆನಂದ ಅವರು  ಮೂಲತ ಚಿಕ್ಕಮಗಳೂರಿನವರಾಗಿದ್ದು  ಪತ್ನಿ ಲಲಿತರೊಂದಿಗೆ ಕದ್ರಿ ಬಳಿ ವಾಸವಾಗಿದ್ದರು ಎಂದು ತಿಳಿದು ಬಂದಿದ್ದು, ಕುಡಿತದ ವಾಹನ ಚಾಲನೆಯಿಂದ ಅಮಾಯಕನಾದ ಆನಂದ ಅವರು ಪ್ರಾಣ ಕಳಕೊಂಡಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply