Connect with us

    LATEST NEWS

    ಬಾರ್ಕೂರು ಚೌಳಿ ಕರೆಗೆ ಬಿದ್ದ ಕಾರು ಓರ್ವ ಸಾವು

    ಉಡುಪಿ ಜೂನ್ 21: ಗ್ರಹಣ ದಿನವೇ ಬಾರ್ಕೂರು ಸಮೀಪ ಕಾರೊಂದು ಕೆರೆ ಬಿದ್ದ ಪರಿಣಾಮ ಒರ್ವ ಮೃತಪಟ್ಟಿರುವ ಘಟನೆ ನಡೆದಿದೆ. ಮೃತರನ್ನು ಉದ್ಯಮಿ ವಕ್ವಾಡಿಯ ಸಂತೋಷ ಶೆಟ್ಟಿ ಎಂದು ಗುರುತಿಸಲಾಗಿದ್ದು ಇವರು ಕೋಟೇಶ್ವರ ಸಮೀಪದ ಬೀಜಾಡಿಯಲ್ಲಿ ಶ್ರೀ ಲಕ್ಷ್ಮೀ ಗ್ಲಾಸ್ ಮತ್ತು ಫ್ಲೈ ವುಡ್ ಶಾಪ್ ನಡೆಸುತ್ತಿದ್ದರು ಎಂದು ಹೇಳಲಾಗಿದೆ.

    ಬಾರ್ಕೂರಿನಿಂದ ಸಾಬರ್ ಕಟ್ಟೆ ಮಾರ್ಗದಲ್ಲಿ ಬಾರ್ಕೂರಿನ ಐತಿಹಾಸಿಕ ಚೌಳಿ ಕೆರೆ ಸಮೀಪ ಕಾರಿನಲ್ಲಿ ಬರುತ್ತಿರುವ ಸಂದರ್ಭ ತಿರುವಿನಲ್ಲಿ ಕೆರೆ ಗಮನಿಸದ ಹಿನ್ನಲೆ ನಿಯಂತ್ರಣ ತಪ್ಪಿ ಕಾರು ಕೆರೆಗೆ ಬಿದ್ದಿದೆ.


    ಈ ಕೆರೆಗೆ ಯಾವುದೇ ತಡೆಗೋಡೆಗಳು ಇಲ್ಲದ ಹಿನ್ನಲೆಯಲ್ಲಿ ಕಾರು ಕೆರೆಗೆ ಬಿದ್ದಿದ್ದು, ಸ್ಥಳೀಯರ ನೆರವಿನಿಂದ ಕಾರಿನಲ್ಲಿದ್ದ ಸಂತೋಷ ಶೆಟ್ಟಿ ರಕ್ಷಿಸುವ ಯತ್ನನಡೆಸಲಾಗಿತ್ತು. ಆದರೂ ನೀರಿನಲ್ಲಿ ಮುಳುಗಿ ಸಾವನಪ್ಪಿದ್ದಾರೆ.  ಕಾರಿನಲ್ಲಿದ್ದ ಮಹಿಳೆಯ ವಿವರ ಇನ್ನಷ್ಟೇ ತಿಳಿದುಬರಬೇಕಾಗಿದೆ, ಸದ್ಯ ಅವರನ್ನು ಆಸ್ಪತ್ರೆಗೆ ಸಾಗಿಸಲಾಗಿದೆ.

    Share Information
    Advertisement
    Click to comment

    You must be logged in to post a comment Login

    Leave a Reply