BANTWAL
ಕಾಲೇಜ್ ಬಸ್ ಹಾಗೂ ಆಡು ಸಾಗಾಟ ಲಾರಿ ಡಿಕ್ಕಿ 15ಕ್ಕೂ ಹೆಚ್ಚು ಆಡು ಬಲಿ
ಕಾಲೇಜ್ ಬಸ್ ಹಾಗೂ ಆಡು ಸಾಗಾಟ ಲಾರಿ ಡಿಕ್ಕಿ 15ಕ್ಕೂ ಹೆಚ್ಚು ಆಡು ಬಲಿ
ಬಂಟ್ವಾಳ ಸೆಪ್ಟೆಂಬರ್ 6: ಕಾಲೇಜ್ ಬಸ್ ಮತ್ತು ಆಡು ಸಾಗಾಟ ಲಾರಿ ಪರಸ್ಪರ ಢಿಕ್ಕಿ ಹೊಡೆದ ಪರಿಣಾಮ 15ಕ್ಕೂ ಹೆಚ್ಚು ಆಡುಗಳು ಬಲಿಯಾದ ಘಟನೆ ದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳ ಮಾಣಿ ಸಮೀಪ ಮಿತ್ತೂರು ಹೆದ್ದಾರಿಯಲ್ಲಿ ಸಂಭವಿಸಿದೆ.
ಘಟನೆಯಲ್ಲಿ ಇಬ್ಬರು ಗಾಯಗೊಂಡಿದ್ದು, ಬಸ್ ನಲ್ಲಿದ್ದ ಕಾಲೇಜು ವಿದ್ಯಾರ್ಥಿಗಳು ಅದೃಷ್ಟವಶಾತ್ ಅಪಾಯದಿಂದ ಪಾರಾಗಿದ್ದಾರೆ. ಮಂಗಳೂರಿನಿಂದ ಪುತ್ತೂರು ಕಡೆ ಹೋಗುತ್ತಿದ್ದ ಆಡು ಸಾಗಾಟದ ಲಾರಿಗೆ ಕುಂಬ್ರದಿಂದ ಬರುತ್ತಿದ್ದ ಕುಂಬ್ರ ಮರ್ಕಝ್ ಶರೀಅತ್ ಕಾಲೇಜಿಗೆ ಸೇರಿದ ಕಾಲೇಜ್ ಬಸ್ ಮುಖಾಮುಖಿ ಢಿಕ್ಕಿ ಹೊಡೆದಿದೆ.
ಶಾಲಾ ಬಸ್ ನ ಮುಂಭಾಗ ಹಾಗೂ ಲಾರಿ ಹಿಂಬಾಗ ಜಖಂ ಗೊಂಡಿದ್ದು ಘಟನಾ ಸ್ಥಳಕ್ಕೆ ವಿಟ್ಲ ಪೊಲೀಸರ ಭೇಟಿ ನೀಡಿ ಪ್ರಕರಣ ದಾಖಲು ಮಾಡಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲು ಮಾಡಲು ಸಹಕರಿಸಿದರು.
You must be logged in to post a comment Login