LATEST NEWS
ಕೂದಲು ಕಸಿ ಮಾಡಿಸಿಕೊಳ್ಳಲು ಹೋಗಿ ಪ್ರಾಣ ಬಿಟ್ಟ ಯುವಕ..!
ದೆಹಲಿ, ಡಿಸೆಂಬರ್ 04: ಇತ್ತೀಚಿನ ದಿನಗಳಲ್ಲಿ ಜನರು ಕೂದಲ ಕಸಿ ಮಾಡಿಸುವವರ ಸಂಖ್ಯೆ ಸಾಕಷ್ಟು ಏರಿಕೆಯಾಗಿದೆ. ಇದರಿಂದ ಕೆಲವೊಬ್ಬರಿಗೆ ಒಳ್ಳೆಯದು ಆದರೆ ಮತ್ತೊಂದಿಷ್ಟು ಜನರಿಗೆ ಸಮಸ್ಯೆಯೂ ಆಗಿದ್ದಿದೆ.
ಇದೀಗ ವೈದ್ಯರ ಯಡವಟ್ಟಿನಿಂದ ಕೂದಲು ಕಸಿ ಮಾಡಿಕೊಳ್ಳಲು ಹೋದ ವ್ಯಕ್ತಿಯೊಬ್ಬನ ಪ್ರಾಣ ಪಕ್ಷಿಯೇ ಹಾರಿ ಹೋಗಿದೆ.
ದೆಹಲಿಯ ವ್ಯಕ್ತಿ ಅಥರ್ ರಶೀದ್ ಎಂಬ 30 ವರ್ಷದ ವ್ಯಕ್ತಿಯೊಬ್ಬ ಕೂದಲ ಕಸಿ ಮಾಡಿಸಿಕೊಳ್ಳಲು ಆಸ್ಪತ್ರೆಗೆ ಹೋಗಿದ್ದರು ಕೂದಲ ಕಸಿ ಮಾಡಿಸಿಕೊಂಡ ನಂತರ ರಶೀದ್ ಗೆ ಬಹು ಅಂಗಾಂಗ ವೈಫಲ್ಯ ಉಂಟಾಗಿ ಸಾವನ್ನಪ್ಪಿದ್ದಾರೆ. ಈ ಕೂದಲು ಕಸಿ ನೋವಿನಿಂದಲೇ ಬಹು ಅಂಗಾಂಗ ವೈಫಲ್ಯ ಉಂಟಾಗಿರೋದು ಎಂದು ಹೇಳಲಾಗುತ್ತಿದೆ.
ಕೂದಲ ಶಸ್ತ್ರಚಿಕಿತ್ಸೆಯ ಬಳಿಕ ಮೈಮೇಲೆ ಗುಳ್ಳೆಗಳಾಗಿದ್ದವು ಎಂದು ರಶೀದ್ ತಾಯಿ ಆಸಿಯಾ ಬೇಗಂ ಹೇಳಿದ್ದಾರೆ. ಈ ಸಂಬಂಧ ರಶೀದ್ ಕುಟುಂಬ ಪೊಲೀಸರಿಗೆ ದೂರು ನೀಡಿದ್ದಾರೆ. ಶಸ್ತ್ರಚಿಕಿತ್ಸೆ ನಡೆಸಿದ ಇಬ್ಬರು ವೈದ್ಯರು ಸೇರಿದಂತೆ ಒಟ್ಟು ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.
You must be logged in to post a comment Login