Connect with us

    LATEST NEWS

    ಪುನೀತ್ ರಾಜಕುಮಾರ್ ನಿಧನರಾದ ಸುದ್ದಿಯನ್ನು ನೋಡಿ ನಾಪತ್ತೆಯಾದ ಕಾರ್ಕಳದಲ್ಲಿ ವ್ಯಕ್ತಿ , ಹಲವು ಸಂಶಯಗಳಿಗೆ ಎಡೆ

    ಉಡುಪಿ, ನವೆಂಬರ್ 03: ಕಾರ್ಕಳದಲ್ಲಿ ವ್ಯಕ್ತಿಯೊಬ್ಬ ನಾಪತ್ತೆಯಾಗಿದ್ದಾರೆ. 56 ವರ್ಷದ ದಿನೇಶ್ ಕಾಣೆಯಾಗಿರುವ ವ್ಯಕ್ತಿ. ಪುನೀತ್ ರಾಜಕುಮಾರ್ ನಿಧನರಾದ ಸುದ್ದಿಯನ್ನು ಟಿವಿಯಲ್ಲಿ ನೋಡಿದ ನಂತರ ಇವರು ನಾಪತ್ತೆಯಾಗಿರುವುದು ಹಲವು ಸಂಶಯಗಳಿಗೆ ಎಡೆಮಾಡಿದೆ.

    ಮೂಲತಹ ಚಿಕ್ಕಮಗಳೂರು ಜಿಲ್ಲೆಯ ಕಡೂರಿನ ದಿನೇಶ್ ನಾಪತ್ತೆಯಾಗಿ ನಾಲ್ಕು ದಿನಗಳಾಗಿವೆ. ಪತಿ ಕಾಣೆಯಾದ ಬಗ್ಗೆ ಮಂಗಳವಾರ ಪತ್ನಿ ಸುಮಾ ಕಾರ್ಕಳ ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ದಿನೇಶ್ ಈ ಹಿಂದೆ ಕಾರ್ಕಳದ ರಾಧಿಕಾ ಥಿಯೇಟರ್ನಲ್ಲಿ ಟಿಕೆಟ್ ಕಲೆಕ್ಟರ್ ಆಗಿದ್ದರು.

    ಸಿನಿಮಾನಟರು ಗಳ ಬಗ್ಗೆ ಅಪಾರ ಅಭಿಮಾನ ಹೊಂದಿದ್ದರು, ಲಾಕ್ಡೌನ್ ಆರಂಭವಾದ ನಂತರ ಕಾರ್ಕಳದ ದಾನಶಾಲಾ ವರ್ಧಮಾನ ಲಾಡ್ಜ್ ಗೆ ಕೆಲಸಕ್ಕೆ ಸೇರಿದ್ದರು. ಪುನೀತ್ ಅನಾರೋಗ್ಯ ಮತ್ತು ಸಾವಿನ ಸುದ್ದಿ ತಿಳಿಯುತ್ತಿದ್ದಂತೆ, ತನ್ನ ವಸ್ತುಗಳು ಹಾಗೂ ಮೊಬೈಲನ್ನು ಲಾಡ್ಜಿನಲ್ಲಿ ಬಿಟ್ಟು, ತೆರಳಿದ್ದಾರೆ.

    ನಾಪತ್ತೆಯಾಗಿರುವ ದಿನೇಶ್, ಪುನೀತ್ ಅಂತಿಮ ಯಾತ್ರೆ ನೋಡಲು ಬೆಂಗಳೂರಿಗೆ ತೆರಳಿರುವ ಸಾಧ್ಯತೆಗಳಿವೆ. ಅಥವಾ ಹುಟ್ಟೂರು ಕಡೂರಿಗೂ ಹೋಗಿರಬಹುದು ಎಂದು ಊಹಿಸಲಾಗಿದೆ. ಆದರೆ ನಾಲ್ಕುದಿನಗಳಿಂದ ಈ ವ್ಯಕ್ತಿಯ ಬಗ್ಗೆ ಯಾವುದೇ ಮಾಹಿತಿ ದೊರೆತಿಲ್ಲ. ಹಿಂದೆ ಎರಡು ಮೂರು ಬಾರಿ ಮನೆಯಿಂದ ತೆರಳಿ ನಂತರ ವಾಪಸಾಗಿದ್ದರು ಅಂತಲೂ ತಿಳಿದುಬಂದಿದೆ.

    Share Information
    Advertisement
    Click to comment

    You must be logged in to post a comment Login

    Leave a Reply