DAKSHINA KANNADA
ಬಸ್ ಏರಲು ಯತ್ನಿಸಿದ ಯುವಕನನ್ನು ಕಾಲಿಂದ ಒದ್ದು ಹೊರಗೆ ಹಾಕಿದ KSRTC ಸಿಬ್ಬಂದಿ
ಪುತ್ತೂರು, ಸೆಪ್ಟೆಂಬರ್ 08: ಬಸ್ ಏರಲು ಯತ್ನಿಸಿದ ಯುವಕನನ್ನು ಕೆ.ಎಸ್.ಆರ್.ಟಿ.ಸಿ ಸಿಬ್ಬಂದಿ ಕಾಲಿಂದ ಒದ್ದು ಹೊರಗೆ ಹಾಕಿದ ಅಮಾನವೀಯ ಘಟನೆ ಪುತ್ತೂರಿನ ಈಶ್ವರಮಂಗಲದಲ್ಲಿ ನಡೆದಿದೆ.
ಪುತ್ತೂರಿನ ಈಶ್ವರಮಂಗಲ ಎಂಬಲ್ಲಿ ಬಸ್ ಏರಲು ಯತ್ನಿಸಿದ ಯುವಕನನ್ನು ಕಂಡಕ್ಟರ್ ಕಪಾಳಕ್ಕೆ ಹೊಡೆದು, ಕಾಲಿಂದ ಒದ್ದು ಹೊರಗೆ ಹಾಕಿ ಅಮಾನವೀಯ ವರ್ತನೆ ತೋರಿದ್ದಾರೆ.
ಮದ್ಯದ ಅಮಲಿನಲ್ಲಿದ್ದ ಯುವಕನ ಮೇಲೆ ಕೆ.ಎಸ್.ಆರ್.ಟಿ.ಸಿ ಸಿಬ್ಬಂದಿ ಅಮಾನವೀಯ ಕೃತ್ಯ ಎಸಗಿದ್ದು, ರಸ್ತೆ ಮೇಲೆ ಬಿದ್ದ ಯುವಕನನ್ನು ರಸ್ತೆಯಲ್ಲೇ ಬಿಟ್ಟು ಹೋಗಿದ್ದಾರೆ. ಬಿದ್ದ ರಭಸಕ್ಕೆ ಯುವಕನ ತಲೆಗೆ ಗಾಯವಾಗಿದ್ದು, ಸಾರ್ವಜನಿಕರು ಯುವಕನನ್ನು ಉಪಚರಿಸಿದ್ದಾರೆ. ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಕೆ.ಎಸ್.ಆರ್.ಟಿ.ಸಿ ಸಿಬ್ಬಂದಿ ವರ್ತನೆಗೆ ವ್ಯಾಪಕ ಖಂಡನೆ ವ್ಯಕ್ತವಾಗಿದೆ.
You must be logged in to post a comment Login