LATEST NEWS
ಕೋವಿಡ್ ನಿಂದ ಮೃತಪಟ್ಟ ಇಬ್ಬರ ಅಂತ್ಯ ಸಂಸ್ಕಾರ ನೆರವೇರಿಸಿ ಮಾನವೀಯತೆ ಮೆರೆದ ಮುಸ್ಲಿಂ ಯುವಕರ ತಂಡ
ಬ್ರಹ್ಮಾವರ, ಮೇ 08: ಇಂದು ಬ್ರಹ್ಮಾವರದ ಪ್ರಣವ ಆಸ್ಪತ್ರೆಯಲ್ಲಿ ಕೋವಿಡ್ ನಿಂದ ಮರಣ ಹೊಂದಿದ ಮಾಬುಕಳ ಮತ್ತು ಸಾಲಿಗ್ರಾಮದ ಇಬ್ಬರು ವ್ಯಕ್ತಿಗಳ ಅಂತ್ಯಕ್ರಿಯೆಯನ್ನು KMJ SSF SYS ಸಹಾಯ್ ಬ್ರಹ್ಮಾವರ ತಂಡವು ನಡೆಸಿ ಮಾನವೀಯತೆ ಮೆರೆದಿದೆ.
ಮೃತ ನರಸಿಂಹ ಕುಂದರ್ ಮತ್ತು ಮಾಬುಕಳದ ಗಿರಿಜಮ್ಮ ಅವರ ಅಂತ್ಯ ಸಂಸ್ಕಾರವನ್ನು ಈ ತಂಡವು ಬ್ರಹ್ಮಾವರದ ಹಿಂದೂ ರುಧ್ರಭೂಮಿಯಲ್ಲಿ ಗೌರವಯುತವಾಗಿ ನಡೆಸಿದೆ.
ಈ ಮಾನವೀಯ ಸೇವೆಯಲ್ಲಿ ಸುಭಾನ್ ಹೊನ್ನಾಳ, ಮುಸ್ತಾಕ್ ಹೊನ್ನಾಳ, ಇಮ್ತಿಯಾಜ್ ಹೊನ್ನಾಳ, ಇಬ್ರಾಹಿಂ ರಂಗನಕೆರೆ, ಸಿದ್ದೀಕ್ ಅಂಬಾಗಿಲು, ಶಂಶುದ್ದಿನ್ ರಂಗನಕೆರೆ, ಹಾಗೂ ಗಾಂಧಿನಗರದ ನಯಾಜ್ ಕೈಜೋಡಿಸಿದರು.
You must be logged in to post a comment Login