Connect with us

    BELTHANGADI

    ಅಕ್ರಮ ಸಂಬಂಧಕ್ಕೆ ಹುಟ್ಟಿದ ಮಗುವನ್ನು ಕೊಂದು ಮಣ್ಣಿನಡಿ ಹೂತು ಹಾಕಿದ ಪಾಪಿ ತಂದೆ

    ಅಕ್ರಮ ಸಂಬಂಧಕ್ಕೆ ಹುಟ್ಟಿದ ಮಗುವನ್ನು ಕೊಂದು ಮಣ್ಣಿನಡಿ ಹೂತು ಹಾಕಿದ ಪಾಪಿ ತಂದೆ

    ಬೆಳ್ತಂಗಡಿ ಅಕ್ಟೋಬರ್ 1: ಅಕ್ರಮ ಸಂಬಂದದಿಂದ ಹುಟ್ಟಿದ ಒಂದು ವಾರದ ಗಂಡು ಮಗುವನ್ನು ಕೊಂದು ಮಣ್ಣಿನಡಿಯಲ್ಲಿ ಹೂತು ಹಾಕಿದ ಘಟನೆ ಬೆಳ್ತಂಗಡಿ ತಾಲೂಕಿನ ಪಟ್ರಮೆ ಎಂಬಲ್ಲಿ ನಡೆದಿದೆ.

    ಹಾಸನ ಮೂಲದ ಶಿವಪ್ಪ ಬೆಳ್ತಂಗಡಿಯ ಪಟ್ರಮೆಗೆ ಕೂಲಿ ಕೆಲಸಕ್ಕೆ ಬಂದಿದ್ದು, ಸ್ಥಳೀಯ ನಿವಾಸಿ ಪುಷ್ಟ ಎಂಬ ಯುವತಿಯೊಂದಿಗೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದ. ಈಗಾಗಲೇ ಇವರಿಗೆ 10ರ ಪ್ರಾಯದ ಹೆಣ್ಣು ಮಗಳಿದ್ದು, ಈಗ ಮತ್ತೊಂದು ಗಂಡು ಮಗು ಹುಟ್ಟಿದ ಹಿನ್ನಲೆಯಲ್ಲಿ ಮಗುವನ್ನು ಕೊಂದು ಮಣ್ಣಿನಲ್ಲಿ ಹೂತು ಹಾಕಿದ್ದಾನೆ.

    ನವಜಾತ ಶಿಶುವನ್ನು ಕೊಂದಿದ್ದು, ಪುಷ್ಟಳ ಸಹೋದರನ ಗಮನಕ್ಕೆ ಬಂದ ಹಿನ್ನಲೆಯಲ್ಲಿ ಸೆಪ್ಟೆಂಬರ್ 29 ರಂದು ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದನು. ಈ ಹಿನ್ನಲೆಯಲ್ಲಿ ಪಾಪಿ ತಂದೆಯನ್ನು ಬೆಳ್ತಂಗಡಿ ಸರ್ಕಲ್ ಇನ್ಸ್‌ಪೆಕ್ಟರ್ ನಾಗೇಶ್ ನೇತ್ರತ್ವದ ತಂಡ ಬಂದಿಸಿದ್ದು ಮಗುವನ್ನು ಬೆಳ್ತಂಗಡಿ ತಹಶೀಲ್ದಾರ್ ಮದನ್ ಮೊಹನ್ ಸಮ್ಮುಖದಲ್ಲಿ ಇಂದು ಹೂತಿಟ್ಟ ಸ್ಥಳದಿಂದ ಮೇಲಕ್ಕೆತ್ತಿ ಶವ ಪರೀಕ್ಷೆ ಮಾಡಲಾಯಿತು. ಪಾಪಿ ತಾಯಿಯ ಬಂಧನಕ್ಕೆ ಪೋಲೀಸರು ಬಲೆ ಬೀಸಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply