Connect with us

    DAKSHINA KANNADA

    ಕಡಬದಲ್ಲಿ ನಡೆದ ಅಮಾನವೀಯ ಘಟನೆ.. ಸ್ಪೋಟಕ ತಿಂದು ಬಾಯಿಯನ್ನೇ ಕಳೆದುಕೊಂಡ ಹಸು

    ಕಡಬದಲ್ಲಿ ನಡೆದ ಅಮಾನವೀಯ ಘಟನೆ.. ಸ್ಪೋಟಕ ತಿಂದು ಬಾಯಿಯನ್ನೇ ಕಳೆದುಕೊಂಡ ಹಸು

    ಮಂಗಳೂರು ಫೆಬ್ರವರಿ 17: ಕಾಡು ಹಂದಿ ಹಿಡಿಯಲು ಬಳಸಿದ ಸ್ಪೋಟಕವನ್ನು ತಿಂದು ಹಸುವೊಂದು ಗಂಭೀರವಾಗಿ ಗಾಯಗೊಂಡ ಅಮಾನವೀಯ ಘಟನೆ ದಕ್ಷಿಣಕನ್ನಡ ಜಿಲ್ಲೆಯ ಕಡಬ ತಾಲೂಕಿನ ಸಂಪಡ್ಕ ಎಂಬಲ್ಲಿ ನಡೆದಿದೆ.

    ಕಾಡು ಹಂದಿಗಳನ್ನು ಹಿಡಿಯಲು ಕಿಡಿಗೇಡಿಗಳು ಸ್ಪೋಟಕವನ್ನು ಆಹಾರ ಪದಾರ್ಥಗಳ ಒಳಗೆ ಬಚ್ಚಿಡುತ್ತಿತ್ತು, ಆಹಾರವನ್ನು ಪ್ರಾಣಿಗಳು ತಿನ್ನುವ ಸಂದರ್ಭದಲ್ಲಿ ಈ ಸ್ಫೋಟಕಗಳು ಸ್ಪೋಟಗೊಂಡು ಪ್ರಾಣಿಗಳು ಸಾವನ್ನಪ್ಪುತ್ತವೆ.

    ಸಾರ್ವಜನಿಕರು ಓಡಾಡುವ ಸ್ಥಳಗಳಲ್ಲೇ ಕಿಡಿಗೇಡಿಗಳು ಇಂಥ ದುಸ್ಸಾಹಸಕ್ಕೆ ಇಳಿದಿದ್ದು, ಈ ಬಾರಿ ಹಸು ಸ್ಪೋಟಕಕ್ಕೆ ಸಿಲುಕಿ ಗಂಭೀರವಾಗಿ ಗಾಯಗೊಂಡಿದೆ. ದೇರಾಜೆಯ ಬಾಲಚಂದ್ರ ಎನ್ನುವವರಿಗೆ ಸೇರಿದ ಹಸು ಇದಾಗಿದ್ದು, ಕಾಡು ಪ್ರಾಣಿಗಳ ಬೇಟೆಕೋರರ ಹಟ್ಟಹಾಸಕ್ಕೆ ಇದೊಂದು ಜೀವಂತ ನಿದರ್ಶನವಾಗಿದೆ.

    Share Information
    Advertisement
    Click to comment

    You must be logged in to post a comment Login

    Leave a Reply