Connect with us

    DAKSHINA KANNADA

    ರೌಡಿಗಳ ಗುಂಡಿಗೆ 8 ಪೋಲೀಸರು ಬಲಿ……….

    ರೌಡಿಗಳ ಗುಂಡಿಗೆ 8 ಪೋಲೀಸರು ಬಲಿ……….

     

    ಕಾನ್ಪುರ, ಜುಲೈ 3: ಲಿಯಾದ ಘಟನೆ ಉತ್ತರಪ್ರದೇಶದ ಕಾನ್ಪುರ ಜಿಲ್ಲೆಯ ಬಿಕಾರು ಗ್ರಾಮದಲ್ಲಿ ನಡೆದಿದೆ.

    ಕೊಲೆಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ, ರೌಡಿಶೀಟರ್ ವಿಕಾಸ್ ದುಬೆ ಎಂಬಾತನನ್ನು ಬಂಧಿಸಲು ತೆರಳಿದ್ದ ಕಾನ್ಪುರ ಜಿಲ್ಲಾ ಪೋಲೀಸರ ಮೇಲೆ ವಿಕಾಸ್ ದುಬೆ ಹಾಗೂ ಆತನ ಸಹಚರರು ಏಕಾಏಕಿ ಗುಂಡಿನ ಸುರಿಮಳೆಗೈದಿದ್ದಾರೆ.

    ಘಟನೆಯಲ್ಲಿ ಡಿವೈಎಸ್ಪಿ ದೇವೇಂದ್ರ ಮಿಶ್ರಾ ಸೇರಿದಂತೆ 8 ಪೋಲೀಸರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಅಲ್ಲದೆ ಪೋಲೀಸರು ಹಾಗೂ ಸಾರ್ವಜನಿಕರು ಸೇರಿದಂತೆ 7 ಮಂದಿ ಗಾಯಗೊಂಡಿದ್ದಾರೆ.

    ವಿಕಾಸ್ ದುಬೆ ಕುಖ್ಯಾತ ರೌಡಿಯಾಗಿದ್ದು, ಹಲವಾರು ಪ್ರಕರಣಗಳಿಗೆ ಸಂಬಂಧಿಸಿದಂತೆ ಪೋಲೀಸರಿಗೆ ಬೇಕಾದ ಆರೋಪಿಯೂ ಆಗಿದ್ದ.

    2001 ರಲ್ಲಿ ಉತ್ತರಪ್ರದೇಶ ಬಿಜೆಪಿ ಸರಕಾರದ ಮಂತ್ರಿಯಾಗಿದ್ದ ಸಂತೋಷ್ ಶುಕ್ಲಾ ಎಂಬವರನ್ನು ಪೋಲೀಸ್ ಠಾಣೆಯ ಒಳಗಡೆಯೇ ಗುಂಡು ಹಾರಿಸಿ ಕೊಂದ ಆರೋಪಿಯೂ ಆಗಿದ್ದಾನೆ.

    ಇತ್ತೀಚೆಗೆ ಕೊಲೆಯತ್ನದ ಪ್ರಕರಣ ದಾಖಲಾದ ಹಿನ್ನಲೆಯಲ್ಲಿ ಪೋಲೀಸರ ತಂಡ ಆತನ ಬಂಧಿನಕ್ಕಾಗಿ ಬಿಕಾರು ಗ್ರಾಮಕ್ಕೆ ತೆರಳಿತ್ತು.

    ಕತ್ತಲೆಯ ಅವಕಾಶವನ್ನು ಬಳಸಿಕೊಂಡ ರೌಡಿಗಳ ತಂಡ ಪೋಲೀಸರ ಹತ್ಯೆ ನಡೆಸಿದ ಬಳಿಕ ತಲೆಮರೆಸಿಕೊಂಡಿದೆ.

    ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಈ ಘಟನೆಯನ್ನು ಖಂಡಿಸಿದ್ದು, ಆರೋಪಿಯ ವಿರುದ್ಧ ಕಠಿಣ ಕ್ರಮ ಜರಗಿಸುವಂತೆ ಉತ್ತರ ಪ್ರದೇಶ ಪೋಲೀಸ್ ಮಹಾನಿರ್ದೇಶಕರಿಗೆ ಸೂಚಿಸಿದ್ದಾರೆ.

    ಘಟನೆ ನಡೆದ ಸ್ಥಳದಲ್ಲಿ ಇದೀಗ ಭಾರೀ ಪೋಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದ್ದು, ಆರೋಪಿಗಳ ಪತ್ತೆಗಾಗಿ ಕ್ರಮಗಳನ್ನು ಕೈಗೊಳ್ಳಲಾಗಿದೆ.

    Share Information
    Advertisement
    Click to comment

    You must be logged in to post a comment Login

    Leave a Reply