Connect with us

DAKSHINA KANNADA

25,000 ಸಾವಿರ ಲಂಚ ಸ್ವೀಕಾರ, ಸಹಕಾರಿ ನಿಬಂಧಕ ಮತ್ತು ಚಾಲಕನನ್ನು ಬಂಧಿಸಿದ ಎಸಿಬಿ..

ಪುತ್ತೂರು, ಜುಲೈ.20: ಇಲ್ಲಿನ ಅಧಿಕಾರಿಯೊಬ್ಬ ಲಂಚ ಸ್ವೀಕರಿಸುತ್ತಿದ್ದ ವೇಳೆ ರೆಡ್ ಹ್ಯಾಂಡ್ ಆಗಿ ಎಸಿಬಿ ಬಲೆಗೆ ಬಿದ್ದಿದ್ದಾರೆ. ಸಹಕಾರಿ‌ ಸಂಘಗಳ ಸಹಾಯಕ ‌‌ನಿಬಂಧಕ ಅಧಿಕಾರಿ ಕೆ‌ ಮಂಜುನಾಥ್ ಮತ್ತು ಚಾಲಕ  ರಾಧಾಕೃಷ್ಣ  ಪೊಲೀಸ್ ಬಲೆಗೆ ಬಿದ್ದ ಅಧಿಕಾರಿ ಮತ್ತು ಸಿಬಂದಿ .

ಸಹಕಾರಿ ಸಂಘ ಮಾಡಲು ಪರವಾನಿಗೆ ಮಾಡಲು 25000ರೂಪಾಯಿ ಲಂಚ ಪಡೆಯುತ್ತಿದ್ದ ಸಂದರ್ಭದಲ್ಲಿ ಎಸಿಬಿ ಎಸ್ ಪಿ ಶ್ರುತಿ, ಡಿವೈಎಸ್ ಪಿ ಸುಧೀರ್ ಹೆಗ್ಡೆ ನೇತ್ರತ್ವದಲ್ಲಿ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ರೆಡ್ ಹ್ಯಾಂಡ್ ಆಗಿ ಬಂಧಿಸಿದ್ದಾರೆ. ಮುಂದುವರೆದ ತನಿಖೆಯಲ್ಲಿ ಮಂಜುನಾಥನ ಮನೆಯಿಂದ 2.20 ಲಕ್ಷ ಅಕ್ರಮ ಹಣವನ್ನು ಪೋಲಿಸರು ವಶಕ್ಕೆ ಪಡೆದಿದ್ದಾರೆ.

Advertisement
Click to comment

You must be logged in to post a comment Login

Leave a Reply