LATEST NEWS
ಎರಡು ತಿಂಗಳಿನಿಂದ ಗ್ರಾಮಸ್ಥರ ನಿದ್ದೆಗೆಡಿಸಿದ್ದ ಕಾಳಿಂಗ ಸರ್ಪ ಸೆರೆ
ಎರಡು ತಿಂಗಳಿನಿಂದ ಗ್ರಾಮಸ್ಥರ ನಿದ್ದೆಗೆಡಿಸಿದ್ದ ಕಾಳಿಂಗ ಸರ್ಪ ಸೆರೆ
ಉಡುಪಿ ನವೆಂಬರ್ 3: ಕಳೆದ ಎರಡು ತಿಂಗಳಿನಿಂದ ಗ್ರಾಮಸ್ಥರ ನಿದ್ದೆಗೆಡಿಸಿದ ಕಾಳಿಂಗ ಸರ್ಪ ಕೊನೆಗೂ ಸೆರೆಯಾಗಿದೆ. ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಬೈಲೂರು ಪರಿಸರದಲ್ಲಿ ಈ ಕಾಳಿಂಗ ಹಾವು ಕಾಣಿಸಿಕೊಂಡಿದ್ದು, ಹಾವನ್ನು ಕಂಡ ಗ್ರಾಮಸ್ಥರು ಬೆಚ್ಚಿಬಿದ್ದಿದ್ದರು. ಈ ಬಾರಿ ಉರಗತಜ್ಞರ ಸಹಾಯದಿಂದ ಹಾವನ್ನು ಸೆರೆಹಿಡಿಯುವಲ್ಲಿ ಯಶಸ್ಸಿಯಾಗಿದ್ದಾರೆ.
ಕಳೆದ ಎರಡು ತಿಂಗಳ ಹಿಂದೆಯೂ ಕಾರ್ಕಳ ತಾಲೂಕಿನ ಜಾರ್ಕಳ ಅರ್ಜೆಡ್ಡು ಪ್ರದೇಶದಲ್ಲಿ ಈ ಕಾಳಿಂಗ ಹಾವು ಮರವೇರಿ ಕುಳಿತು ಗ್ರಾಮಸ್ಥರ ನಿದ್ದೆಗೆಡಿಸಿತ್ತು. ಗ್ರಾಮಸ್ಥರು ಕಾಳಿಂಗ ಹಾವನ್ನು ಸೆರೆ ಹಿಡಿಯಲು ಕಾದು ಕುಳಿತರೂ ಮರದಿಂದ ಕೆಳಕ್ಕೆ ಇಳಿಯಲೇ ಇಲ್ಲ. ಅದು ಮರದಲ್ಲೇ ಠಿಕಾಣಿ ಹೊಡಿತ್ತು. ಬಳಿಕ ಬೆಳಗ್ಗಿನ ಜಾವ ಅಲ್ಲಿಂದ ಕಣ್ಮರೆಯಾಗಿತ್ತು.
ಕೊನೆಗೂ ಬೈಲೂರು ಪೇಟೆಯಲ್ಲಿ ಗುರುವಾರ ರಾತ್ರಿ ಮತ್ತೆ ಈ ಕಾಳಿಂಗ ಸರ್ಪ ಕಾಣಿಸಿ ಕೊಂಡಿದೆ. ಕೊಡಲೇ ಉರಗ ತಜ್ಞ ಅನಿಲ್ ಪ್ರಭು ಅವರಿಗೆ ಸ್ಥಳಿಯರು ಮಾಹಿತಿ ನೀಡಿದ್ದು ಸ್ಥಳಕ್ಕೆ ಆಗಮಿಸಿ ಹಾವನ್ನು ಸರೆ ಹಿಡಿದಿದ್ದಾರೆ. 13 ಅಡಿಗಳಷ್ಟು ಉದ್ದ ಇರುವ ಈ ಕಾಳಿಂಗ ಸರ್ಪವನ್ನು ಸದ್ಯ ಅರಣ್ಯಾಧಿಕಾರಿಗಳ ನೆರವಿನೊಂದಿಗೆ ಅಭಯಾರಣ್ಯ ಕ್ಕೆ ಬಿಡಲಾಗಿದೆ.
You must be logged in to post a comment Login