Connect with us

    LATEST NEWS

    ಪೆಟ್ರೋಲ್ ಸುರಿದು ತಂದೆಯಿಂದ ಮಗನ ಕೊಲೆ ಯತ್ನ ಪ್ರಕರಣ – ಗಾಯಾಳು ಮಗ ಸಾವು

    ಮಂಗಳೂರು, ಜುಲೈ 1: ಕಳೆದ ತಿಂಗಳು ತಂದೆಯೇ ತನ್ನ ಮಗನ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಕೊಲೆಗೆ ಯತ್ನಿಸಿದ್ದ ಪ್ರಕರಣದಲ್ಲಿ ಗಾಯಾಳಾಗಿದ್ದ ಮಗ ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಇಂದು ಸಾವನಪ್ಪಿದ್ದಾರೆ.


    ಮೃತರನ್ನು ಸ್ವಾಮೀತ್ ಶೆಟ್ಟಿ (25) ಎಂದು ಗುರುತಿಸಲಾಗಿದ್ದು, ಜೂನ್ 21 ರಂದು ಜಪ್ಪಿನಮೊಗರುವಿನ ಕೊಪ್ಪರಿಗೆಗುತ್ತು ಎಂಬಲ್ಲಿ ಆರೋಪಿ ವಿಶ್ವನಾಥ ಶೆಟ್ಟಿ ದನ ಕಟ್ಟುವ ವಿಚಾರ ದಲ್ಲಿ ಕೋಪಗೊಂಡು ತನ್ನ ಮಗ ಸ್ವಾಮೀತ್ ಶೆಟ್ಟಿ ಮೇಲೆಯೇ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದರು. ಇದರಿಂದ ಸ್ವಾಮಿತ್ ಶರೀರದ ಮೇಲೆ ಸುಟ್ಟಗಾಯಗಳಾಗಿದ್ದವು. ಈ ಬಗ್ಗೆ ಕಂಕನಾಡಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದರ ಬೆನ್ನಲ್ಲೇ ಆರೋಪಿ ತಂದೆಯನ್ನು ಪೊಲೀಸರು ಬಂಧಿಸಿದ್ದರು.

    ಆದರೆ ಗಂಭೀರ ಸುಟ್ಟಗಾಯಳಾಗಿದ್ದು ಸ್ವಾಮಿತ್ ಶೆಟ್ಟಿ ಇಂದು ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾನೆ.

    Share Information
    Advertisement
    Click to comment

    You must be logged in to post a comment Login

    Leave a Reply