Connect with us

    LATEST NEWS

    ಸದಸ್ಯರನ್ನು ಕಳೆದುಕೊಂಡ ಕುಟುಂಬಗಳ ಶಾಪ ಕಾಂಗ್ರೇಸ್ ನ್ನು ಸುಡಲಿದೆ – ಡಿ.ವಿ ಸದಾನಂದ ಗೌಡ

    ಸದಸ್ಯರನ್ನು ಕಳೆದುಕೊಂಡ ಕುಟುಂಬಗಳ ಶಾಪ ಕಾಂಗ್ರೇಸ್ ನ್ನು ಸುಡಲಿದೆ – ಡಿ.ವಿ ಸದಾನಂದ ಗೌಡ

    ಬೆಂಗಳೂರು ಜನವರಿ 7: ದಕ್ಷಿಣಕನ್ನಡ ಜಿಲ್ಲೆಯಲ್ಲಿ ನಡೆಯುತ್ತಿರುವ ಸರಣಿಕೊಲೆಗಳಿಗೆ ಕಾಂಗ್ರೇಸ್ ಸರಕಾರದ ದುರಾಡಳಿತವೇ ಕಾರಣ ಎಂದು ಕೇಂದ್ರ ಸಚಿವ ಡಿ.ವಿ ಸದಾನಂದ ಗೌಡ ಆರೋಪಿಸಿದ್ದಾರೆ.

    ಈ ಕುರಿತು ಟ್ವೀಟ್ ಮಾಡಿ ಡಿ.ವಿ ಸದಾನಂದ ಗೌಡ ಬಶೀರ್ ಹತ್ಯೆ ಸೇರಿದಂತೆ ದೀಪಕ್ ರಾವ್ ಕೊಲೆ ಗಳು ಕಾಂಗ್ರೇಸ್ ಸರಕಾರ ಗೃಹ ಇಲಾಖೆಯನ್ನು ಸ್ವಹಿತಕ್ಕಾಗಿ ಬಳಿಸಿಕೊಂಡ ಫಲ ಎಂದು ಆರೋಪಿಸಿದರು.

    ಡಿ.ವಿ ಸದಾನಂದ ಗೌಡರ ಟ್ವೀಟ್

    ” ದಕ್ಷಿಣ ಕನ್ನಡದಲ್ಲಿ ನಡೆಯುತ್ತಿರುವ ಸರಣಿ ಕೊಲೆಗಳು ಕಾಂಗ್ರೆಸ್ ಪಕ್ಷದ ದುರಾಡಳಿತ ಮತ್ತು ಗೃಹ ಇಲಾಖೆಯನ್ನು ಸ್ವಹಿತಕ್ಕಾಗಿ ಬಳಸಿಕೊಂಡ ಫಲ . ನಿನ್ನೆ ಹಿಂದೂ ಯುವಕ ದೀಪಕ್ ರಾವ್ ಇಂದು ಮುಸ್ಲಿಂ ಯುವಕ ಬಷೀರ್ . ಸದಸ್ಯರನ್ನು ಕಳೆದುಕೊಂಡ ಕುಟುಂಬಗಳು ನೀಡುವ ಶಾಪ ನಿಮ್ಮನ್ನು ಸುಡದೇ ಬಿಡಲಾರವು
    ಇನ್ನಾದರೂ ದಕ್ಷಿಣ ಕನ್ನಡದ ನಿಮ್ಮ ಕಾಂಗ್ರೆಸ್ ಮುಖಂಡರುಗಳು ಪ್ರಚೋದನೆ ಮಾಡದೆ ಬಾಯಿ ಮುಚ್ಚಿರಲು ಹೇಳಿ ರಾಜಕೀಯ ಬಿಟ್ಟು ಶಾಂತಿ ಕಾಪಾಡುವತ್ತ ಗಮನ ಹರಿಸಿ , ಪರಸ್ಪರ ಜನರಲ್ಲಿ ವಿಶ್ವಾಸ ಮೂಡಿಸಿ ”

    Share Information
    Advertisement
    Click to comment

    You must be logged in to post a comment Login

    Leave a Reply