Connect with us

    DAKSHINA KANNADA

    ಸಂಸದೆ ಶೋಭಾ ಕರಂದ್ಲಾಜೆ ವಿರುದ್ದ ಕಾಂಗ್ರೆಸ್ ಕ್ರಮ ಕೈಗೊಳ್ಳಲಿ ; ಎಸ್.ಡಿ.ಪಿ.ಐ ಒತ್ತಾಯ

    ಮಂಗಳೂರು, ಜುಲೈ.19: ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೇಸ್ ಪಕ್ಷದ ಆಡಳಿತದ ವಿರುದ್ಧ ಸುಳ್ಳು ಆರೋಪಗಳನ್ನು ಹೊರಿಸುತ್ತಿರುವ ಸಂಸದೆ ಶೋಭಾ ಕರಂದ್ಲಾಜೆ ವಿರುದ್ಧ ಸರಕಾರಿ ಕಠಿಣ ಕಾನೂನು ಕ್ರಮ ಜರುಗಿಸಬೇಕೆಂದು ಸೋಷಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ ಆಗ್ರಹಿಸಿದೆ.
    ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಎಸ್.ಡಿ.ಪಿ.ಐ ಜಿಲ್ಲಾ ಕಾರ್ಯದರ್ಶಿ ಇಕ್ಬಾಲ್ ಬೆಳ್ಳಾರೆ ಉತ್ತರಪ್ರದೇಶದಲ್ಲಿ ಕೋಮು ಧ್ರುವೀಕರಣ ನಡೆಸಿ ಅಧಿಕಾರ ಪಡೆದಂತೆ ರಾಜ್ಯದಲ್ಲೂ ಬಿಜೆಪ ಪಕ್ಷ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಸುಳ್ಳಿನ ರಾಜಕಾರಣ ಮಾಡುತ್ತಿದೆ ಎಂದು ಆರೋಪಿಸಿದ ಅವರು ರಾಜ್ಯದಲ್ಲಿ ವಿವಿಧ ಕಾರಣಗಳಲ್ಲಿ ಹತ್ಯೆಗೀಡಾದ ಹಿಂದೂಗಳ ಪಟ್ಟಿಯನ್ನು ಗೃಹಸಚಿವ ರಾಜ್ ನಾಥ್ ಸಿಂಗ್ ಗೆ ನೀಡುವ ಮೂಲಕ ಶೋಭಾ ಕರಂದ್ಲಾಜೆ ಈ ಎಲ್ಲಾ ಕೊಲೆಗಳನ್ನು ಪಿಎಫ್ಐ ಸಂಘಟನೆ ನಡೆಸಿದೆ ಎಂದು ಮನವಿ ನೀಡಿದ್ದಾರೆ. ಆದರೆ ಈ ಎಲ್ಲಾ ಕೊಲೆಗಳಾದವರು ವೈಯುಕ್ತಿಕ ವಿಚಾರಗಳ ನೆಲೆಯಲ್ಲಿ ಪ್ರಾಣತೆತ್ತಿದ್ದು, ಇದಕ್ಕೂ ಪಿಎಫ್ಐ ಗೂ ಯಾವುದೇ ಸಂಬಂಧವಿಲ್ಲ ಎಂದರು. ಅಲ್ಲದೆ ಶೋಭಾ ಕರಂದ್ಲಾಜೆಯವರು ನೀಡಿದ ಪಟ್ಟಿಯಲ್ಲಿ ಜೀವಂತವಾಗಿರುವವರನ್ನು ಸತ್ತಂತೆ ಬಿಂಬಿಸಿದ್ದು, ಇಂಥಹ ಬೇಜಾವಾಬ್ದಾರಿತನ ಪ್ರದರ್ಶಿಸಿದ ಸಂಸದೆ ಜನರ ಕ್ಷಮೆಯಾಚಿಸಬೇಕು ಹಾಗೂ ರಾಜೀನಾಮೆ ನೀಡಬೇಕೆಂದು ಅವರು ಆಗ್ರಹಿಸಿದರು. ಸುಳ್ಳುಗಳ ಸರಮಾಲೆಯ ಮೂಲಕ ರಾಜ್ಯದ ಆಡಳಿತ ನಡೆಸುವ ಕಾಂಗ್ರೇಸ್ ಸರಕಾರದ ವಿರುದ್ಧ ಆರೋಪಗಳನ್ನು ಮಾಡುತ್ತಿರುವ ಸಂಸದೆಯ ಮೇಲೆ ಕಠಿಣ ಕ್ರಮ ಜರುಗಿಸಬೇಕೆಂದೂ ಅವರು ಸರಕಾರವನ್ನು ಒತ್ತಾಯಿಸಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply