DAKSHINA KANNADA
ಮಂಗಳೂರು ರೈಲು ನಿಲ್ದಾಣದಲ್ಲಿ ಮೇಲ್ಘಾವಣಿ ಕುಸಿತ, ಹಲವರಿಗೆ ಗಾಯ. ಒರ್ವ ಗಂಭೀರ..
ಮಂಗಳೂರು,ಜುಲೈ27:ಮೇಲ್ಘಾವಣಿ ಕುಸಿದು ಹಲವರು ಗಾಯಗೊಂಡ ಘಟನೆ ಮಂಗಳೂರು ಸೆಂಟ್ರಲ್ ರೈಲ್ವೇ ನಿಲ್ದಾಣದಲ್ಲಿ ನಡೆದಿದೆ. ಗಾಯಗೊಂಡವರು ಇದೀಗ ವೆನ್ಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಒರ್ವನ ತಲೆಗೆ ಗಂಭೀರ ಗಾಯಗಳಾಗಿವೆ.
ರೈಲಿನ ಟಿಕೆಟ್ ಕೌಂಟರ್ ಪಕ್ಕದಲ್ಲೇ ಈ ದುರ್ಘಟನೆ ನಡೆದಿದ್ದು, ಟಿಕೆಟ್ ಗಾಗಿ ಸಾಲಲ್ಲಿ ನಿಂತವರ ಮೇಲೆ ಮೇಲ್ಘಾವಣಿ ಕುಸಿದಿದೆ. ಹಳೇ ಮೇಲ್ಚಾವಣಿ ಇದಾಗಿದ್ದು, ಛಾವಣಿಯ ಬಿರುಕು ಬಿಟ್ಟ ಗಾರೆ ಕೆಳ ಭಾಗದಲ್ಲಿ ಟಿಕೇಟ್ ಕೌಂಟರಿಗೆ ಸರತಿಯಲ್ಲಿ ನಿಂತವರ ಮೇಲೆ ಬಿದ್ದದೆ. ಈ ಸಂದರ್ಭದಲ್ಲಿ ಹಲವರಿಗೆ ಅಲ್ಪ ಪ್ರಮಾಣದ ಗಾಯಗಳಾಗಿದ್ದರೆ ಓರ್ವನಿನೆ ತಲೆಗೆ ಗಂಭೀರ ಸ್ವರೂಪದ ಗಾಯಗಳಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ.
ಈತನನನ್ನು ಕೇರಳದ ಬಿಜು ಎಂದು ಗುರುತಿಸಲಾಗಿದ್ದು, ತನ್ನ ತಾಯಿಯ ಚಿಕಿತ್ಸೆಗಾಗಿ ನಗರದ ಖಾಸಾಗಿ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದು ವಾಪಸ್ ತೆರಳಲು ರೈಲು ನಿಲ್ದಾಣಕ್ಕೆ ಬಂದು ಟಿಕೆಟ್ ಖರೀದಿಸಲು ಸರತಿಯಲ್ಲಿ ನಿಂತಾಗ ಈ ದುರ್ಘಟನೆ ಸಂಭವಿಸಿದೆ. ಘಟನೆ ನಡೆದ ಸಂದರ್ಭದಲ್ಲಿ ಸ್ಥಳದಲ್ಲಿದ್ದ ರೈಲ್ವೇ ಪೋಲೀಸರು ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.
You must be logged in to post a comment Login