UDUPI
ಕಾವೇರಿ ನದಿ ವಿವಾದಾತ್ಮಕ ಹೇಳಿಕೆ ಪ್ರೊ.ಕೆ.ಎಸ್ ಭಗವಾನ್ ವಿರುದ್ದ ಕೇಸ್
ಕಾವೇರಿ ನದಿ ವಿವಾದಾತ್ಮಕ ಹೇಳಿಕೆ ಪ್ರೊ.ಕೆ.ಎಸ್ ಭಗವಾನ್ ವಿರುದ್ದ ಕೇಸ್
ಉಡುಪಿ ಅಕ್ಟೋಬರ್ 3: ಪ್ರೊ.ಕೆ.ಎಸ್ ಭಗವಾನ್ ವಿರುದ್ದ ಉಡುಪಿ ನಗರ ಠಾಣೆಯಲ್ಲಿ ದೂರು ದಾಖಲಾಗಿದೆ. ಕಾವೇರಿ ನದಿ ಕೇವಲ ಕರ್ನಾಟಕ ರಾಜ್ಯಕ್ಕೆ ಮಾತ್ರ ಸೇರಿದ್ದಲ್ಲ, ಹಲವು ರಾಜ್ಯಗಳಿಗೆ ಸೇರಿದ್ದು ಎಂದಿರುವ ಭಗವಾನ್ ಇದರಿಂದ ಕನ್ನಡಿಗರ ಮನಸ್ಸಿಗೆ ನೋವುಂಟಾಗಿದೆ.
ಅಲ್ಲದೆ ಶ್ರೀ ರಾಮಚಂದ್ರನ ವಿರುದ್ಧ ಅವಹೇಳನಕಾರಿ ಹೇಳಿಗೆ ನೀಡಿರುವ ಭಗವಾನ್ ರಾಮ ಒಬ್ಬ ವ್ಯಭಿಚಾರಿ ಎಂದಿದ್ದರು. ಈ ಮೂಲಕ ಕೋಟ್ಯಾಂತರ ಹಿಂದೂಗಳ ಧಾರ್ಮಿಕ ಭಾವನೆಗೆ ಧಕ್ಕೆಯಾಗಿದೆ. ಈ ಎಲ್ಲಾ ಕಾರಣಕ್ಕಾಗಿ ಭಗವಾನ್ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಉಡುಪಿ ಜಿಲ್ಲಾ ಕರ್ನಾಟಕ ರಕ್ಷಣಾ ವೇದಿಕೆ, ಕಾರ್ಮಿಕ ವೇದಿಕೆ ಜಂಟಿಯಾಗಿ ದೂರು ನೀಡಿದ್ದು, ಭಗವಾನ್ ಅವರನ್ನು ಇನ್ನು ಮುಂದೆ ಉಡುಪಿಗೆ ಕಾಲಿಡಲು ಬಿಡುವುದಿಲ್ಲ ಎಂದು ಇದೇ ಸಂದರ್ಭದಲ್ಲಿ ಕಾರ್ಮಿಕ ಸಂಘಟನೆ ಜಿಲ್ಲಾಧ್ಯಕ್ಷ ರವಿ ಶೆಟ್ಟಿ ಎಚ್ಚರಿಕೆಯನ್ನೂ ನೀಡಿದ್ದಾರೆ
You must be logged in to post a comment Login