Connect with us

    MANGALORE

    ನೀರು ಬಿಲ್ ಪಾವತಿಗೆ 15 ದಿನ :ತಪ್ಪಿದ್ದಲ್ಲಿ ನೀರಿನ ಸಂಪರ್ಕ ಕಡಿತ

    ಮಂಗಳೂರು, ಆಗಸ್ಟ್ 26 : ಮಂಗಳೂರು ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿನ ನೀರಿನ ಬಳಕೆದಾರರಿಗೆ ಈಗಾಗಲೇ ನೀರಿನ ಬಿಲ್ ವಿತರಣೆಯಾಗುತ್ತಿದ್ದು, ಆದರೆ ಬಳಕೆದಾರರು ಸರಿಯಾಗಿ ಬಿಲ್ಲು ಪಾವತಿಸದೆ ಬಾಕಿ ಉಳಿದಿದ್ದು, ಅಂತಹ ಬಳಕೆದಾರರು 15 ದಿನದೊಳಗಾಗಿ ಪಾವತಿಸಬೇಕು. ತಪ್ಪಿದ್ದಲ್ಲಿ ಕಾನೂನು ರೀತ್ಯಾ ನೀರಿನ ಸಂಪರ್ಕ ಕಡಿತಗೊಳಿಸಿ ನಿಯಮಾನುಸಾರ ಕ್ರಮವಹಿಸಲಾಗುವುದು. ಸಾರ್ವಜನಿಕರು ಅನಧಿಕೃತವಾಗಿ/ಮಾಪಕ ಅಳವಡಿಸದೇ ನೀರಿನ ಸಂಪರ್ಕ ಪಡೆದು ಕೊಂಡಿದ್ದಲ್ಲಿ ಅಂತಹ ಸಂಪರ್ಕಗಳ ಬಗ್ಗೆ ಪಾಲಿಕೆಗೆ 15 ದಿನದೊಳಗೆ ಮಾಹಿತಿ ನೀಡಿ ಸಕ್ರಮಗೊಳಿಸಲು ಕ್ರಮ ವಹಿಸಲಾಗಿದೆ. ತಪ್ಪಿದ್ದಲ್ಲಿ ಅಂತಹವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕಾಗುತ್ತದೆ ಎಂದು ಪಾಲಿಕೆಆಯುಕ್ತರು ಎಚ್ಚರಿಸಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply