Connect with us

    DAKSHINA KANNADA

    ದೇಯಿ ಬೈದೆದಿಗೆ ಅವಮಾನವಾಗಿದ್ದು ಗೊತ್ತೇ ಇಲ್ಲ-ವೀರಪ್ಪ ಮೊಯಿಲಿ

    ದೇಯಿ ಬೈದೆದಿಗೆ ಅವಮಾನವಾಗಿದ್ದು ಗೊತ್ತೇ ಇಲ್ಲ-ವೀರಪ್ಪ ಮೊಯಿಲಿ

    ಪುತ್ತೂರು,ಅಕ್ಟೋಬರ್ 10: ಪಡುಮಲೆಯ ದೇಯಿಬೈದೆದಿ ಔಷಧೀಯ ವನದಲ್ಲಿರುವ ಕೋಟಿ-ಚೆನ್ನಯರ ತಾಯಿ ದೇಯಿಬೈದೆದಿ ಪುತ್ಥಳಿಗೆ ಅವಮಾನ ಮಾಡಿದ ವಿಚಾರ ತಮಗೆ ತಿಳಿದೇ ಇಲ್ಲ ಎಂದು ಮಾಜಿ ಕೇಂದ್ರ ಸಚಿವ ವೀರಪ್ಪ ಮೊಯಿಲಿ ಪ್ರತಿಕ್ರಿಯಿಸಿದ್ದಾರೆ‌. ಪುತ್ತೂರಿನಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು ದೇಯಿಬೈದೆದಿ ಎಲ್ಲರ ಗೌರವಕ್ಕೆ ಪಾತ್ರರಾದವರಾಗಿದ್ದು, ಅವರಿಗೆ ಅವಮಾನ ಮಾಡುವುದು ತಪ್ಪು ಎಂದರು.ಒಂದು ವೇಳೆ ಅವಮಾನ ಮಾಡಿದ್ದೇ ಆದಲ್ಲಿ ಅದನ್ನು ಎಲ್ಲರೂ ಸೇರಿ ಸರಿಪಡಿಸುವ ಎಂದು ಅವರು ಇದೇ ಸಂದರ್ಭದಲ್ಲಿ ಅವರು ಅಭಿಪ್ರಾಯಪಟ್ಟರು. ಕೇರಳ ರಾಜ್ಯದಲ್ಲಿ ಬಿಜೆಪಿ ಹಮ್ಮಿಕೊಂಡಿರುವ ಜನರಕ್ಷಾ ಯಾತ್ರೆ ಕುರಿತು ಪ್ರತಿಕ್ರಿಯಿಸಿದ ಅವರು ರಾಜಕೀಯಕ್ಕೋಸರ ಕಾರ್ಯಕ್ರಮಗಳನ್ನು ಮಾಡುವುದು ಅವರ ಸ್ವಾತಂತ್ರ್ಯ ಎಂದರು. ಕೇರಳದಲ್ಲಿ ಸಿಪಿಐ ಮತ್ತು ಕಾಂಗ್ರೇಸ್ ಪಕ್ಷ ಮಾತ್ರವಿದ್ದು, ಬಿಜಿಪಿಗೆ ಕೇರಳದಲ್ಲಿ ಅಸ್ತಿತ್ವವೇ ಇಲ್ಲ ಎಂದು ಅವರು ವ್ಯಂಗ್ಯವಾಡಿದರು.

    Share Information
    Advertisement
    Click to comment

    You must be logged in to post a comment Login

    Leave a Reply