DAKSHINA KANNADA
ತಾಕತ್ತಿದ್ದರೆ ನಮ್ಮನ್ನು ಬಂಧನ ಮಾಡಿ ಬಂಧನ ಮಾಡಿದರೆ ಅಂದೇ ಕಾಂಗ್ರೆಸ್ ಪಕ್ಷದ ಶವ ಪೆಟ್ಟಿಗೆಗೆ ಕೊನೆಯ ಮೊಳೆ ಹೊಡೆದಂತೆ – ಶೋಭಾ ಕರಂದ್ಲಾಜೆ
ಮಂಗಳೂರು ಜುಲೈ 13 – ಮಂಗಳೂರಲ್ಲಿ ರಾಷ್ಟ್ರೀಯ ತನಿಖಾ ದಳದ ಕಚೇರಿ ತೆರೆಯಿರಿ, ಕೇರಳ- ಭಟ್ಕಳದ ಪಾತಕಿಗಳಿಗೆ ಲಗಾಮು ಹಾಕಿ ಕೆಎಫ್ ಡಿ- ಪಿ ಎಫ್ ಐ ಸಂಘಟನೆಗಳನ್ನು ಬ್ಯಾನ್ ಮಾಡಿ ಸಂಸದೆ ಶೋಭಾ ಕರಂದ್ಲಾಜೆ ಒತ್ತಾಯಿಸಿದ್ದಾರೆ. ಆರ್ ಎಸ್ ಎಸ್ ಕಾರ್ಯಕರ್ತ ಶರತ್ ಸಾವನ್ನು ಮುಚ್ಚಿಟ್ಟು ಸಮಾವೇಶವನ್ನು ಕಾಂಗ್ರೇಸ್ ನಡೆಸಿದೆ. ಆದರೆ ಈಗ ಶರತ್ ಡೆತ್ ಸರ್ಟಿಫಿಕೇಟ್ ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್ ಆಗಿದೆ. ಸಾವನ್ನು ಮುಚ್ವಿಟ್ಟು ನೀವು ಕಾಂಗ್ರೆಸ್ ಸಮಾವೇಶ ಮಾಡಿದ್ರಿ ಒಂದು ದಿನ ಮೊದಲೇ ಶರತ್ ಸಾವಾಗಿತ್ತು,
ನಿಮ್ಮ ಇಂಟೆಲಿಜೆನ್ಸ್ ವರದಿಯನ್ನು ಮುಚ್ಚಿಟ್ಟಿದ್ಯಾಕೆ ಪ್ರತಿಭಟನಾ ಸಭೆಯಲ್ಲಿ ಸಂಸದೆ ಶೋಭಾ ಕರಂದ್ಲಾಜೆ ಹೇಳಿಕೆ
ಮಂಗಳೂರು ಪುರಭವನದಲ್ಲಿ ಪ್ರತಿಭಟನಾ ಸಭೆ ಸಭೆಯಲ್ಲಿ ಸಂಸದೆ ಶೊಭಾ ಕರಂದ್ಲಾಜೆ ಆಕ್ರೋಶ ದ ಭಾಷಣ ತಾಕತ್ತಿದ್ದರೆ ಪ್ರಭಾಕರ್ ಭಟ್ ರನ್ನು ಬಂಧಿಸಿ, ಶೋಭಾ ಮತ್ತು ಪ್ರಭಾಕರ್ ಭಟ್ ರನ್ನು ಬಂಧನ ಮಾಡೋಕೆ ಕೆಂಪಯ್ಯ ಸೂಚನೆ ನೀಡಿದ್ದಾರೆ, ತಾಕತ್ತಿದ್ದರೆ ನಮ್ಮನ್ನು ಬಂಧನ ಮಾಡಿ ಬಂಧನ ಮಾಡಿದರೆ ಅಂದೇ ಕಾಂಗ್ರೆಸ್ ಪಕ್ಷದ ಶವ ಪೆಟ್ಟಿಗೆಗೆ ಕೊನೆಯ ಮೊಳೆ ಹೊಡೆದಂತೆ ಪ್ರತಿಭಟನಾ ಸಭೆಯಲ್ಲಿ ಶೋಭಾ ಕರಂದ್ಲಾಜೆ ಆಕ್ರೋಶ ಸರ್ಕಾರಕ್ಕೆ ತಲೆಯೂ ಇಲ್ಲ ಹೃದಯವೂ ಇಲ್ಲ, ಕಾಂಗ್ರೆಸ್ ಪಕ್ಷಕ್ಕೆ ತಲೆಯಿಲ್ಲ ಸಿದ್ದರಾಮಯ್ಯ ಸರ್ಕಾರಕ್ಕೆ ಹೃದಯ ಇಲ್ಲ ತಲೆ – ಹೃದಯ ಇಲ್ಲದ ಸರ್ಕಾರ ನಮಗೆ ಬೇಕಾ ಸಂಸದೆ ಶೋಭಾ ಕರಂದ್ಲಾಜೆ ಪ್ರಶ್ನೆ. ರಮಾನಾಥ ರೈ- ಯು.ಟಿ ಖಾದರ್ ಇಬ್ಬರನ್ನೂ ಬಿಡಲ್ಲ ನಿಮ್ಮಿಬ್ಬರಿಗೂ ಸೋಲು ಖಚಿತ ಮಂಗಳೂರಲ್ಲಿ ಸಂಸದೆ ಶೋಭಾ ಕರಂದ್ಲಾಜೆ ವಾಗ್ದಾಳಿ.
You must be logged in to post a comment Login