Connect with us

    DAKSHINA KANNADA

    ಜನವರಿ 7 ರಂದು ಜಿಲ್ಲಾ ಬಂದ್ ಗೆ ಚಿಂತನೆ – ಜಗದೀಶ್ ಶೇಣವ

    ಜನವರಿ 7 ರಂದು ಜಿಲ್ಲಾ ಬಂದ್ ಗೆ ಚಿಂತನೆ – ಜಗದೀಶ್ ಶೇಣವ

    ಪುತ್ತೂರು ಜನವರಿ 2: ಹಿಂದೂ ಸಂಘಟನೆ ಹಾಗೂ ಮುಖಂಡರ ಮೇಲೆ ದೌರ್ಜನ್ಯ ನಡೆಸುತ್ತಿರುವ ಸಂಪ್ಯ ಪೋಲೀಸ್ ಠಾಣೆಯ ಎಸೈ ಅಬ್ದುಲ್ ಖಾದರ್ ಹಾಗೂ ಮೂವರು ಕಾನ್ ಸ್ಟೇಬಲ್ ಗಳನ್ನು ಸಸ್ಪೆಂಡ್ ಮಾಡದೇ ಹೋದಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯರ ನಿಯೋಜಿತ ದಕ್ಷಿಣಕನ್ನಡ ಭೇಟಿಯ ದಿನದಂದೇ ಜಿಲ್ಲಾ ಬಂದ್ ಗೆ ಕರೆ ನೀಡಲು ಚಿಂತನೆ ನಡೆಸಲಾಗುವುದು ಎಂದು ವಿಶ್ವ ಹಿಂದೂ ಪರಿಷತ್ ನ ಮಂಗಳೂರು ನಗರಾಧ್ಯಕ್ಷ ಜಗದೀಶ್ ಶೇಣವ ಎಚ್ಚರಿಕೆ ನೀಡಿದ್ದಾರೆ.

    ಸಂಪ್ಯ ಠಾಣೆ ಮುಂದೆ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು ಸಂಪ್ಯ ಠಾಣೆಯ ಎಸೈ ಅಬ್ದುಲ್ ಖಾದರ್ ಹಾಗೂ ಸಿಬ್ಬಂದಿಗಳನ್ನು ಇದೇ ತಿಂಗಳ 5 ನೆ ತಾರಿಖಿನೊಳಗೆ ಸಸ್ಪೆಂಡ್ ಮಾಡದೇ ಹೊದಲ್ಲಿ ಜನವರಿ 7 ರಂದು ಜಿಲ್ಲಾ ಬಂದ್ ಗೆ ಕರೆ ನೀಡಲು ಚಿಂತನೆ ನಡೆಸಲಾಗುವುದು ಎಂದು ಹೇಳಿದರು.

    ಜನವರಿ 7 ರಂದು ಜಿಲ್ಲೆಯಲ್ಲಿ ಮುಖ್ಯಮಂತ್ರಿಯವರ ಸಾಧನಾ ಸಮಾವೇಶ ಕಾರ್ಯಕ್ರಮವಿದ್ದು ಆ ದಿನವೇ ಹಿಂದೂ ಸಂಘಟನೆಗಳು ಬಂದ್ ಕರೆ ನೀಡುವ ಸಾದ್ಯತೆ ಇದ್ದು, ಪರಿಸ್ಥಿತಿ ನಿಭಾಯಿಸಲು ಜಿಲ್ಲಾಡಳಿತ ಯಾವ ರೀತಿ ಕ್ರಮಕೈಗೊಳ್ಳಲಿದ ಎಂದು ಕಾದು ನೋಡಬೇಕಿದೆ.

    Share Information
    Advertisement
    Click to comment

    You must be logged in to post a comment Login

    Leave a Reply